ಕೋಲ್ಕತ್ತ: ‘ಬೀದಿ ಹೋರಾಟಗಾರ್ತಿ’ ಎಂಬ ಹೆಸರಿಗೆ ತಕ್ಕ ಹಾಗೆಯೇ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಕೋಲ್ಕತ್ತದಲ್ಲಿ ಭಾನುವಾರ ಮತ್ತೆ ಚುನಾವಣಾ ಪ್ರಚಾರಕ್ಕೆ ಇಳಿದಿದ್ದಾರೆ. ಅವರು ಸ್ಪರ್ಧಿಸುತ್ತಿರುವ ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ ‘ಹಲ್ಲೆಗೆ ಒಳಗಾಗಿ ಗಾಯಗೊಂಡ’ ನಾಲ್ಕೇ ದಿನದಲ್ಲಿ ಅವರು ಪ್ರಚಾರಕ್ಕೆ ಮರಳಿದ್ದಾರೆ. ಗಾಲಿಕುರ್ಚಿಯಲ್ಲಿ ಬಂದ ಮಮತಾ ಅವರು ರೋಡ್ಶೋದಲ್ಲಿ ಪಾಲ್ಗೊಂಡು ‘ಗಾಯಗೊಂಡ ಹುಲಿ ಹೆಚ್ಚು ಅಪಾಯಕಾರಿ’ ಎಂದು ಹೇಳಿದರು.