<p><strong>ನವದೆಹಲಿ:</strong> ಮಧ್ಯಂತರ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದ ಆರೋಪಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿರುವ ವಿಷಯಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಲಯ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅಸಹಾಯಕರನ್ನು ರಕ್ಷಿಸುವಲ್ಲಿ ವ್ಯವಸ್ಥೆಯೇ ಸೋಲುತ್ತಿದೆ ಎಂದು ಹೇಳಿದೆ.</p>.<p>ಆರೋಪಿ ನಂದನಾಯಕ್, ತನ್ನ ವಿರುದ್ಧದ ಪ್ರಕರಣವೊಂದರಲ್ಲಿ ಪತ್ನಿ ಝರ್ನಾ ಪ್ರತ್ಯಕ್ಷ ಸಾಕ್ಷಿಯಾಗಿದ್ದ ಕಾರಣ, ಆಕೆಯನ್ನು ಕೊಂದಿರುವುದಾಗಿ ಹೇಳಿದ್ದಾನೆ. ತನಗೆ ನೀಡಿದ್ದ ಮಧ್ಯಂತರ ಜಾಮೀನು ರದ್ದಾಗಿ, ಜೈಲಿಗೆ ಹೋಗುವ ವೇಳೆ ಪೊಲೀಸರ ಎದುರು ಈ ಹೇಳಿಕೆ ನೀಡಿದ್ದಾನೆ.</p>.<p>ಹೆಚ್ಚುವರಿ ಸೆಷನ್ ನ್ಯಾಯಾಧೀಶ ಅನುಜ್ ಅಗರ್ವಾಲ್ ‘ಜುಲೈ 16ರಂದು ನೀಡಿದ ಆದೇಶವನ್ನು ಪೊಲೀಸರು ಶ್ರದ್ಧೆಯಿಂದ ಪಾಲಿಸಿಲ್ಲ. ಈ ಆದೇಶದಲ್ಲಿ ಆರೋಪಿ ಪತ್ನಿಗೆ ಭದ್ರತೆ ನೀಡುವಂತೆ ನಿರ್ದೇಶಿಸಲಾಗಿತ್ತು‘ ಎಂದು ಹೇಳಿದರು.</p>.<p>ಈ ಪ್ರಕರಣದ ಬಗ್ಗೆ ವೈಯಕ್ತಿಕವಾಗಿ ಗಮನ ಹರಿಸುವಂತೆ ದೆಹಲಿ ಪೊಲೀಸರಿಗೆ ತಿಳಿಸಿದನ್ಯಾಯಾಲಯ, ಸಂಬಂಧಿಸಿದ ಅಧಿಕಾರಿಗೆ ತನ್ನ ಜವಾಬ್ದಾರಿ ಏನೆಂದು ತಿಳಿಹೇಳಬೇಕು. ಈ ವಿಷಯದಲ್ಲಿ ಅವರು ತೆಗೆದುಕೊಂಡ ಪರಿಹಾರ ಕ್ರಮದ ವರದಿಯನ್ನು ಸಲ್ಲಿಸಬೇಕು ಎಂದು ತಿಳಿಸಿದರು.</p>.<p><a href="https://www.prajavani.net/india-news/after-dhanbad-judge-road-accident-incident-supreme-asked-states-to-report-the-protection-protocols-855208.html" itemprop="url">ನ್ಯಾಯಾಧೀಶರ ಭದ್ರತೆ ಕುರಿತು ವರದಿ ನೀಡಲು ರಾಜ್ಯಸರ್ಕಾರಗಳಿಗೆ ಸುಪ್ರೀಂ ಸೂಚನೆ </a></p>.<p>ನ್ಯಾಯಾಧೀಶರು ಆಗಸ್ಟ್ 5 ರಂದು ನೀಡಿದ್ದ ಆದೇಶದಲ್ಲಿ, ‘ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಒಬ್ಬ ಅಮಾಯಕ ವ್ಯಕ್ತಿ ಜೀವ ಕಳೆದುಕೊಳ್ಳುವಂತಾಯಿತು. ಅಸಹಾಯಕ ಸಂತ್ರಸ್ತರನ್ನು ರಕ್ಷಿಸುವಲ್ಲಿ ವ್ಯವಸ್ಥೆಯೇ ವಿಫಲವಾಗಿದೆ‘ ಎಂದು ಹೇಳಿದ್ದರು.</p>.<p>‘ಶಾಂತಿ, ಸೇವೆ ಮತ್ತು ನ್ಯಾಯ‘ಎನ್ನುವುದು ದೆಹಲಿ ಪೊಲೀಸರ ಧ್ಯೇಯವಾಗಿದೆ. ಆದರೆ ಈ ಪ್ರಕರಣದಲ್ಲಿ ಅವೆಲ್ಲವೂ ಇಲ್ಲವಾಗಿದೆ‘ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ತಿಳಿಸಿದ್ದಾರೆ.</p>.<p><a href="https://www.prajavani.net/karnataka-news/chief-minister-basavaraj-bommai-announces-night-curfew-across-the-state-and-weekend-lockdown-in-855211.html" itemprop="url">ರಾಜ್ಯದಾದ್ಯಂತ ನೈಟ್ ಕರ್ಫ್ಯೂ,ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಲಾಕ್ಡೌನ್: ಬೊಮ್ಮಾಯಿ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಮಧ್ಯಂತರ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದ ಆರೋಪಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿರುವ ವಿಷಯಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಲಯ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅಸಹಾಯಕರನ್ನು ರಕ್ಷಿಸುವಲ್ಲಿ ವ್ಯವಸ್ಥೆಯೇ ಸೋಲುತ್ತಿದೆ ಎಂದು ಹೇಳಿದೆ.</p>.<p>ಆರೋಪಿ ನಂದನಾಯಕ್, ತನ್ನ ವಿರುದ್ಧದ ಪ್ರಕರಣವೊಂದರಲ್ಲಿ ಪತ್ನಿ ಝರ್ನಾ ಪ್ರತ್ಯಕ್ಷ ಸಾಕ್ಷಿಯಾಗಿದ್ದ ಕಾರಣ, ಆಕೆಯನ್ನು ಕೊಂದಿರುವುದಾಗಿ ಹೇಳಿದ್ದಾನೆ. ತನಗೆ ನೀಡಿದ್ದ ಮಧ್ಯಂತರ ಜಾಮೀನು ರದ್ದಾಗಿ, ಜೈಲಿಗೆ ಹೋಗುವ ವೇಳೆ ಪೊಲೀಸರ ಎದುರು ಈ ಹೇಳಿಕೆ ನೀಡಿದ್ದಾನೆ.</p>.<p>ಹೆಚ್ಚುವರಿ ಸೆಷನ್ ನ್ಯಾಯಾಧೀಶ ಅನುಜ್ ಅಗರ್ವಾಲ್ ‘ಜುಲೈ 16ರಂದು ನೀಡಿದ ಆದೇಶವನ್ನು ಪೊಲೀಸರು ಶ್ರದ್ಧೆಯಿಂದ ಪಾಲಿಸಿಲ್ಲ. ಈ ಆದೇಶದಲ್ಲಿ ಆರೋಪಿ ಪತ್ನಿಗೆ ಭದ್ರತೆ ನೀಡುವಂತೆ ನಿರ್ದೇಶಿಸಲಾಗಿತ್ತು‘ ಎಂದು ಹೇಳಿದರು.</p>.<p>ಈ ಪ್ರಕರಣದ ಬಗ್ಗೆ ವೈಯಕ್ತಿಕವಾಗಿ ಗಮನ ಹರಿಸುವಂತೆ ದೆಹಲಿ ಪೊಲೀಸರಿಗೆ ತಿಳಿಸಿದನ್ಯಾಯಾಲಯ, ಸಂಬಂಧಿಸಿದ ಅಧಿಕಾರಿಗೆ ತನ್ನ ಜವಾಬ್ದಾರಿ ಏನೆಂದು ತಿಳಿಹೇಳಬೇಕು. ಈ ವಿಷಯದಲ್ಲಿ ಅವರು ತೆಗೆದುಕೊಂಡ ಪರಿಹಾರ ಕ್ರಮದ ವರದಿಯನ್ನು ಸಲ್ಲಿಸಬೇಕು ಎಂದು ತಿಳಿಸಿದರು.</p>.<p><a href="https://www.prajavani.net/india-news/after-dhanbad-judge-road-accident-incident-supreme-asked-states-to-report-the-protection-protocols-855208.html" itemprop="url">ನ್ಯಾಯಾಧೀಶರ ಭದ್ರತೆ ಕುರಿತು ವರದಿ ನೀಡಲು ರಾಜ್ಯಸರ್ಕಾರಗಳಿಗೆ ಸುಪ್ರೀಂ ಸೂಚನೆ </a></p>.<p>ನ್ಯಾಯಾಧೀಶರು ಆಗಸ್ಟ್ 5 ರಂದು ನೀಡಿದ್ದ ಆದೇಶದಲ್ಲಿ, ‘ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಒಬ್ಬ ಅಮಾಯಕ ವ್ಯಕ್ತಿ ಜೀವ ಕಳೆದುಕೊಳ್ಳುವಂತಾಯಿತು. ಅಸಹಾಯಕ ಸಂತ್ರಸ್ತರನ್ನು ರಕ್ಷಿಸುವಲ್ಲಿ ವ್ಯವಸ್ಥೆಯೇ ವಿಫಲವಾಗಿದೆ‘ ಎಂದು ಹೇಳಿದ್ದರು.</p>.<p>‘ಶಾಂತಿ, ಸೇವೆ ಮತ್ತು ನ್ಯಾಯ‘ಎನ್ನುವುದು ದೆಹಲಿ ಪೊಲೀಸರ ಧ್ಯೇಯವಾಗಿದೆ. ಆದರೆ ಈ ಪ್ರಕರಣದಲ್ಲಿ ಅವೆಲ್ಲವೂ ಇಲ್ಲವಾಗಿದೆ‘ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ತಿಳಿಸಿದ್ದಾರೆ.</p>.<p><a href="https://www.prajavani.net/karnataka-news/chief-minister-basavaraj-bommai-announces-night-curfew-across-the-state-and-weekend-lockdown-in-855211.html" itemprop="url">ರಾಜ್ಯದಾದ್ಯಂತ ನೈಟ್ ಕರ್ಫ್ಯೂ,ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಲಾಕ್ಡೌನ್: ಬೊಮ್ಮಾಯಿ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>