<p><strong>ನವದೆಹಲಿ:</strong> ‘ಪ್ರಧಾನಿ ನರೇಂದ್ರ ಮೋದಿ ಅವರು ವಾಸ್ತವ ಸವಾಲುಗಳನ್ನು ಸ್ವೀಕರಿಸುವುದಿಲ್ಲ. ಅಂತಿಮವಾಗಿ ಇರುವ ವ್ಯವಸ್ಥೆಯನ್ನೇ ನಾಶಪಡಿಸುತ್ತಾರೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.</p>.<p>ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಕೃಷಿ ಕ್ಷೇತ್ರದ ಸುಧಾರಣೆ, ಕಪ್ಪುಹಣ ನಿರ್ಮೂಲನೆ ಸೇರಿದಂತೆ ಸಂಕೀರ್ಣ ವಿಷಯಗಳಿಗೂ ಅವರು ತುರ್ತು ಪರಿಹಾರ ಘೋಷಿಸುತ್ತಾರೆ. ಆದರೆ, ಕೊನೆಗೆ ವ್ಯವಸ್ಥೆಯೇ ಹದಗೆಡಲಿದೆ’ ಎಂದು ದೂರಿದ್ದಾರೆ.</p>.<p>ಯುಪಿಎ ಸರ್ಕಾರಕ್ಕೆ ಕೃಷಿ ವಲಯದ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸುವ ಇಚ್ಛಾಶಕ್ತಿಯೇ ಇರಲಿಲ್ಲ ಎಂಬ ಪ್ರಧಾನಿ ಟೀಕೆಯನ್ನು ಉಲ್ಲೇಖಿಸಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.</p>.<p>‘ಮಂಡಿ ವ್ಯವಸ್ಥೆಯ ಲೋಪ, ಅಲ್ಲಿರುವ ಭ್ರಷ್ಟಾಚಾರದ ಅರಿವು ನಮಗಿದೆ. ನಾವೂ ವ್ಯವಸ್ಥೆ ಸುಧಾರಿಸಲು ಬಯಸುತ್ತೇವೆ. ಅದು ಸುಲಭದ ಕಾರ್ಯವಲ್ಲ, ಸಂಕೀರ್ಣವಾದುದು’ ಎಂದು ಹೇಳಿದರು.</p>.<p>‘ಕಪ್ಪುಹಣ ನಿರ್ಮೂಲನೆಯು ಕ್ಲಿಷ್ಟಕರವಾದ ಸವಾಲು. ಆದರೆ, ಅವರು ನೋಟು ರದ್ದತಿ ಮಾಡಿ, ಸಮಸ್ಯೆಗೆ ಪರಿಹಾರ ಒದಗಿಸಿದ್ದೇವೆ ಎಂದರು. ಅಂತಿಮವಾಗಿ, ಈ ನಿರ್ಧಾರದ ಮೂಲಕ ಅವರು ಹೆಚ್ಚಿನ ಉದ್ಯೋಗಳನ್ನು ಸೃಷ್ಟಿಸುವ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳನ್ನೇ ನಾಶ ಪಡಿಸಿದರು’ ಎಂದು ಅವರು ವ್ಯಾಖ್ಯಾನಿಸಿದರು.</p>.<p>ಈಗ ಕೇಂದ್ರ ರೂಪಿಸಿರುವ ಮೂರು ಕೃಷಿ ಕಾಯ್ದೆಗಳು ಕೂಡಾ ಅಂತಿಮವಾಗಿ ಹಲವು ವರ್ಷಗಳ ಪ್ರಯತ್ನದ ಫಲವಾಗಿ ನಿರ್ಮಾಣವಾಗಿರುವ ಆಹಾರ ಭದ್ರತಾ ವ್ಯವಸ್ಥೆಯನ್ನೇ ನಾಶಪಡಿಸಲಿದೆ ಎಂದು ಟೀಕಿಸಿದರು.</p>.<p>‘ನಾನು ಬಿಜೆಪಿ ಜೊತೆ ಸುದೀರ್ಘ ಹೋರಾಟಕ್ಕೆ ಸಿದ್ಧನಾಗಿದ್ದೇನೆ. ನಾನು ತಾಳ್ಮೆಯುಳ್ಳ ವ್ಯಕ್ತಿ, ಕಾಯುತ್ತೇನೆ. ಖಾಲಿಯಾಗಿದ್ದ ಸುರಂಗಕ್ಕೆ ಕೈಬೀಸುತ್ತಿದ್ದ ಪ್ರಧಾನಿ ಯಾರು ಎಂಬುದು ದೇಶದ ಯುವಜನರಿಗೆ ಒಂದಲ್ಲ ಒಂದು ದಿನ ಅರ್ಥವಾಗಲಿದೆ. ಸತ್ಯ ಒಂದಲ್ಲ ಒಂದುದಿನ ಹೊರಗೆ ಬರಬೇಕು’ ಎಂದು ಹೇಳಿದರು.</p>.<p>‘ವಿರೋಧ ಪಕ್ಷಗಳು ದುರ್ಬಲವಾಗಿವೆ ಎಂಬ ಆರೋಪಗಳನ್ನು ತಳ್ಳಿಹಾಕಿದ ಅವರು, ವಿರೋಧಪಕ್ಷ ತನ್ನ ಕೆಲಸವನ್ನು ಮಾಡುತ್ತಿದೆ. ಆದರೆ, ಜನರ ಧ್ವನಿಯನ್ನು ರಕ್ಷಿಸಬೇಕಾಗಿರುವುದು ಮಾಧ್ಯಮ ಮತ್ತು ನ್ಯಾಯಾಂಗ ವ್ಯವಸ್ಥೆ. ಬಿಜೆಪಿಯು ಈ ಕ್ಷೇತ್ರಗಳ ಮೇಲೂ ತನ್ನ ಪ್ರಾಬಲ್ಯವನ್ನು ಹೊಂದಿದೆ’ ಎಂದೂ ವ್ಯಾಖ್ಯಾನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ‘ಪ್ರಧಾನಿ ನರೇಂದ್ರ ಮೋದಿ ಅವರು ವಾಸ್ತವ ಸವಾಲುಗಳನ್ನು ಸ್ವೀಕರಿಸುವುದಿಲ್ಲ. ಅಂತಿಮವಾಗಿ ಇರುವ ವ್ಯವಸ್ಥೆಯನ್ನೇ ನಾಶಪಡಿಸುತ್ತಾರೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.</p>.<p>ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಕೃಷಿ ಕ್ಷೇತ್ರದ ಸುಧಾರಣೆ, ಕಪ್ಪುಹಣ ನಿರ್ಮೂಲನೆ ಸೇರಿದಂತೆ ಸಂಕೀರ್ಣ ವಿಷಯಗಳಿಗೂ ಅವರು ತುರ್ತು ಪರಿಹಾರ ಘೋಷಿಸುತ್ತಾರೆ. ಆದರೆ, ಕೊನೆಗೆ ವ್ಯವಸ್ಥೆಯೇ ಹದಗೆಡಲಿದೆ’ ಎಂದು ದೂರಿದ್ದಾರೆ.</p>.<p>ಯುಪಿಎ ಸರ್ಕಾರಕ್ಕೆ ಕೃಷಿ ವಲಯದ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸುವ ಇಚ್ಛಾಶಕ್ತಿಯೇ ಇರಲಿಲ್ಲ ಎಂಬ ಪ್ರಧಾನಿ ಟೀಕೆಯನ್ನು ಉಲ್ಲೇಖಿಸಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.</p>.<p>‘ಮಂಡಿ ವ್ಯವಸ್ಥೆಯ ಲೋಪ, ಅಲ್ಲಿರುವ ಭ್ರಷ್ಟಾಚಾರದ ಅರಿವು ನಮಗಿದೆ. ನಾವೂ ವ್ಯವಸ್ಥೆ ಸುಧಾರಿಸಲು ಬಯಸುತ್ತೇವೆ. ಅದು ಸುಲಭದ ಕಾರ್ಯವಲ್ಲ, ಸಂಕೀರ್ಣವಾದುದು’ ಎಂದು ಹೇಳಿದರು.</p>.<p>‘ಕಪ್ಪುಹಣ ನಿರ್ಮೂಲನೆಯು ಕ್ಲಿಷ್ಟಕರವಾದ ಸವಾಲು. ಆದರೆ, ಅವರು ನೋಟು ರದ್ದತಿ ಮಾಡಿ, ಸಮಸ್ಯೆಗೆ ಪರಿಹಾರ ಒದಗಿಸಿದ್ದೇವೆ ಎಂದರು. ಅಂತಿಮವಾಗಿ, ಈ ನಿರ್ಧಾರದ ಮೂಲಕ ಅವರು ಹೆಚ್ಚಿನ ಉದ್ಯೋಗಳನ್ನು ಸೃಷ್ಟಿಸುವ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳನ್ನೇ ನಾಶ ಪಡಿಸಿದರು’ ಎಂದು ಅವರು ವ್ಯಾಖ್ಯಾನಿಸಿದರು.</p>.<p>ಈಗ ಕೇಂದ್ರ ರೂಪಿಸಿರುವ ಮೂರು ಕೃಷಿ ಕಾಯ್ದೆಗಳು ಕೂಡಾ ಅಂತಿಮವಾಗಿ ಹಲವು ವರ್ಷಗಳ ಪ್ರಯತ್ನದ ಫಲವಾಗಿ ನಿರ್ಮಾಣವಾಗಿರುವ ಆಹಾರ ಭದ್ರತಾ ವ್ಯವಸ್ಥೆಯನ್ನೇ ನಾಶಪಡಿಸಲಿದೆ ಎಂದು ಟೀಕಿಸಿದರು.</p>.<p>‘ನಾನು ಬಿಜೆಪಿ ಜೊತೆ ಸುದೀರ್ಘ ಹೋರಾಟಕ್ಕೆ ಸಿದ್ಧನಾಗಿದ್ದೇನೆ. ನಾನು ತಾಳ್ಮೆಯುಳ್ಳ ವ್ಯಕ್ತಿ, ಕಾಯುತ್ತೇನೆ. ಖಾಲಿಯಾಗಿದ್ದ ಸುರಂಗಕ್ಕೆ ಕೈಬೀಸುತ್ತಿದ್ದ ಪ್ರಧಾನಿ ಯಾರು ಎಂಬುದು ದೇಶದ ಯುವಜನರಿಗೆ ಒಂದಲ್ಲ ಒಂದು ದಿನ ಅರ್ಥವಾಗಲಿದೆ. ಸತ್ಯ ಒಂದಲ್ಲ ಒಂದುದಿನ ಹೊರಗೆ ಬರಬೇಕು’ ಎಂದು ಹೇಳಿದರು.</p>.<p>‘ವಿರೋಧ ಪಕ್ಷಗಳು ದುರ್ಬಲವಾಗಿವೆ ಎಂಬ ಆರೋಪಗಳನ್ನು ತಳ್ಳಿಹಾಕಿದ ಅವರು, ವಿರೋಧಪಕ್ಷ ತನ್ನ ಕೆಲಸವನ್ನು ಮಾಡುತ್ತಿದೆ. ಆದರೆ, ಜನರ ಧ್ವನಿಯನ್ನು ರಕ್ಷಿಸಬೇಕಾಗಿರುವುದು ಮಾಧ್ಯಮ ಮತ್ತು ನ್ಯಾಯಾಂಗ ವ್ಯವಸ್ಥೆ. ಬಿಜೆಪಿಯು ಈ ಕ್ಷೇತ್ರಗಳ ಮೇಲೂ ತನ್ನ ಪ್ರಾಬಲ್ಯವನ್ನು ಹೊಂದಿದೆ’ ಎಂದೂ ವ್ಯಾಖ್ಯಾನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>