ಕರೆಯು ಕರ್ನಾಟಕದಿಂದ ಬಂದಿರುವುದಾಗಿ ಪತ್ತೆಯಾಯಿತು. ನಾಗ್ಪುರ ಪೊಲೀಸರ ತಂಡ ಮತ್ತು ಭಯೋತ್ಪಾದನೆ ನಿಗ್ರಹ ದಳವನ್ನು ಬೆಳಗಾವಿಗೆ ಕಳಿಸಲಾಗಿದೆ. ಇದೇ ಜೈಲಿನಲ್ಲಿ ಶಿಕ್ಷೆ ಪಡೆಯುತ್ತಿರುವ, ಭೂಗತಪಾತಕಿ ಜಯೇಶ್ ಕಾಂತಾ ಈ ಕರೆ ಮಾಡಿರುವ ಶಂಕೆ ಇದೆ. ಜೈಲು ಅಧಿಕಾರಿಗಳು ಆತನಿಗೆ ಸೇರಿದ್ದ ದಿನಚರಿಯೊಂದನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.