ನವದೆಹಲಿ: ಎಬಿಜಿ ಶಿಪ್ಯಾರ್ಡ್ ₹23,000 ಕೋಟಿ ವಂಚನೆ ಪ್ರಕರಣದ ಸಂಬಂಧ ಕೇಂದ್ರ ಸರ್ಕಾರವನ್ನು ಬಿಜೆಪಿ ಸಂಸದ ವರುಣ್ ಗಾಂಧಿ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
‘ವಿಜಯ್ ಮಲ್ಯ ₹9,000 ಕೋಟಿ, ನೀರವ್ ಮೋದಿ ಮತ್ತು ₹14,000 ಕೋಟಿ ಮತ್ತು ರಿಷಿ ಅಗರ್ವಾಲ್ ₹23,000 ಕೋಟಿ. ಈಗ ದೇಶದಲ್ಲಿ ಪ್ರತಿದಿನ 14 ಮಂದಿ ಸಾಲದ ಹೊರೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ಧನಪಿಶಾಚಿಗಳು ಮಾತ್ರ ಲೂಟಿ ಹೊಡೆಯುತ್ತಿದ್ದಾರೆ’ ಎಂದು ವರುಣ್ ಟ್ವೀಟ್ ಮಾಡಿದ್ದಾರೆ.
‘ಈ ಮಹಾ ಭ್ರಷ್ಟ ವ್ಯವಸ್ಥೆಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು, ಬಲಿಷ್ಠವಾದ ಸರ್ಕಾರದ ಅವಶ್ಯಕತೆ ಇದೆ’ ಎಂದು ಅವರು ಹೇಳಿದ್ದಾರೆ.