ಈ ಕುರಿತು ಆಗಸ್ಟ್ 24ರಂದು ಬಹಿರಂಗ ಪತ್ರ ಬರೆದಿರುವ ನೇತಾಜಿ ಅವರ ಮೊಮ್ಮಗ ಸೂರ್ಯ ಬೋಸ್ ಮತ್ತು ಮೊಮ್ಮಗಳು ಮಾಧುರಿ ಬೋಸ್, ‘ನೇತಾಜಿ ಅವರು ವಿಮಾನ ಅಪಘಾತದಲ್ಲಿ ಮೃತಪಟ್ಟಿಲ್ಲ ಹಾಗೂ ಟೋಕಿಯೊದಲ್ಲಿ ಇರುವ ರೆಂಕೋಜಿ ದೇವಸ್ಥಾನದಲ್ಲಿ ಇದ್ದ ಚಿತಾಭಸ್ಮ ನೇತಾಜಿ ಅವರದ್ದಲ್ಲ ಎಂದು ನ್ಯಾಯಮೂರ್ತಿ ಮನೋಜ್ ಕುಮಾರ್ ಮುಖರ್ಜಿ ಅವರು 2005ರ ನವೆಂಬರ್ 8ರ ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ. 1999ರಲ್ಲಿ ನಿಯೋಜಿಸಲ್ಪಟ್ಟಿದ್ದ ಈ ಆಯೋಗವು, ನೇತಾಜಿ ಅವರು ಹೇಗೆ, ಎಲ್ಲಿ, ಯಾವ ಕಾರಣದಿಂದ ಮೃತಪಟ್ಟರು? ಎಂಬ ಯಾವ ಮಾಹಿತಿಯನ್ನೂ ವರದಿಯಲ್ಲಿ ನೀಡಿಲ್ಲ’ ಎಂದು ತಿಳಿಸಿದ್ದಾರೆ.