<p><strong>ನವದೆಹಲಿ</strong>: ಜೀವ ವೈವಿಧ್ಯ ನಿರ್ವಹಣಾ ಸಮಿತಿಗಳು (ಬಿಎಂಸಿ) ಹಾಗೂ ಜನರ ಜೀವವೈವಿಧ್ಯ ರಿಜಿಸ್ಟ್ರಿ (ಪಿಬಿಆರ್) ರಚನೆಗೆ ನೀಡಿದ್ದ ಅವಧಿಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ವಿಸ್ತರಿಸಿದೆ.</p>.<p>ಕೋವಿಡ್–19 ಪಿಡುಗಿನ ಕಾರಣ ಅವಧಿಯನ್ನು ವಿಸ್ತರಿಸಲಾಗಿದೆ ನ್ಯಾಯಮಂಡಳಿ ಹೇಳಿದೆ.</p>.<p>ಜೀವ ವೈವಿಧ್ಯ ಕಾಯ್ದೆ, 2002ರ ನಿಯಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಕೋರಿ ಪುಣೆ ಮೂಲದ ಚಂದ್ರಭಾಲ್ ಸಿಂಗ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮಂಡಳಿಯ ಅಧ್ಯಕ್ಷ ನ್ಯಾಯಮೂರ್ತಿ ಆದರ್ಶಕುಮಾರ್ ಗೋಯೆಲ್ ನೇತೃತ್ವದ ನ್ಯಾಯಪೀಠ ನಡೆಸಿತು.</p>.<p>‘ದೇಶವೇ ಕೋವಿಡ್–19 ವಿರುದ್ಧ ಹೋರಾಡುತ್ತಿದೆ. ಹೀಗಾಗಿ ಬಿಎಂಸಿ, ಪಿಬಿಆರ್ಗಳ ರಚನೆಯಲ್ಲಿ ವಿಳಂಬವಾಗಿದೆ. ಅದೇ ರೀತಿ ಜೀವವೈವಿಧ್ಯ ನಿಯಮಗಳ ಪಾಲನೆಗೆ ನೀಡಿದ್ದ ಅವಧಿಯನ್ನು 2021ರ ಜೂನ್ 30ರ ವರೆಗೆ ವಿಸ್ತರಿಸಲಾಗಿದೆ. ಈ ಅವಧಿಯೊಳಗೆ ನಿಯಮ ಪಾಲನೆ ಮಾಡಿದ್ದೇ ಆದಲ್ಲಿ, ನಿಯಮಗಳ ಉಲ್ಲಂಘನೆಗಾಗಿ ನೀಡಬೇಕಿದ್ದ ಪರಿಹಾರವನ್ನು ಮನ್ನಾ ಮಾಡಲಾಗುವುದು’ ಎಂದೂ ನ್ಯಾಯಪೀಠ ಹೇಳಿತು.</p>.<p>ಕೋವಿಡ್–19 ಪಿಡುಗಿನ ಹಿನ್ನೆಲೆಯಲ್ಲಿ ಬಿಎಂಸಿ, ಪಿಬಿಆರ್ಗಳ ರಚನೆ ಸಾಧ್ಯವಾಗಿಲ್ಲ. ಇದಕ್ಕಾಗಿ ಸಮಯ ನೀಡಬೇಕು. ನಿಯಮಗಳ ಉಲ್ಲಂಘನೆಗಾಗಿ ಪಾವತಿಸಬೇಕಾಗಿರುವ ಪರಿಹಾರವನ್ನು ಸಹ ಮನ್ನಾ ಮಾಡುವಂತೆ ಕೆಲವು ರಾಜ್ಯಗಳು ಮನವಿ ಮಾಡಿದ್ದವು. ನ್ಯಾಯಪೀಠ ಈ ಮನವಿಯನ್ನು ಪುರಸ್ಕರಿಸಿ ಆದೇಶ ಹೊರಡಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಜೀವ ವೈವಿಧ್ಯ ನಿರ್ವಹಣಾ ಸಮಿತಿಗಳು (ಬಿಎಂಸಿ) ಹಾಗೂ ಜನರ ಜೀವವೈವಿಧ್ಯ ರಿಜಿಸ್ಟ್ರಿ (ಪಿಬಿಆರ್) ರಚನೆಗೆ ನೀಡಿದ್ದ ಅವಧಿಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ವಿಸ್ತರಿಸಿದೆ.</p>.<p>ಕೋವಿಡ್–19 ಪಿಡುಗಿನ ಕಾರಣ ಅವಧಿಯನ್ನು ವಿಸ್ತರಿಸಲಾಗಿದೆ ನ್ಯಾಯಮಂಡಳಿ ಹೇಳಿದೆ.</p>.<p>ಜೀವ ವೈವಿಧ್ಯ ಕಾಯ್ದೆ, 2002ರ ನಿಯಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಕೋರಿ ಪುಣೆ ಮೂಲದ ಚಂದ್ರಭಾಲ್ ಸಿಂಗ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮಂಡಳಿಯ ಅಧ್ಯಕ್ಷ ನ್ಯಾಯಮೂರ್ತಿ ಆದರ್ಶಕುಮಾರ್ ಗೋಯೆಲ್ ನೇತೃತ್ವದ ನ್ಯಾಯಪೀಠ ನಡೆಸಿತು.</p>.<p>‘ದೇಶವೇ ಕೋವಿಡ್–19 ವಿರುದ್ಧ ಹೋರಾಡುತ್ತಿದೆ. ಹೀಗಾಗಿ ಬಿಎಂಸಿ, ಪಿಬಿಆರ್ಗಳ ರಚನೆಯಲ್ಲಿ ವಿಳಂಬವಾಗಿದೆ. ಅದೇ ರೀತಿ ಜೀವವೈವಿಧ್ಯ ನಿಯಮಗಳ ಪಾಲನೆಗೆ ನೀಡಿದ್ದ ಅವಧಿಯನ್ನು 2021ರ ಜೂನ್ 30ರ ವರೆಗೆ ವಿಸ್ತರಿಸಲಾಗಿದೆ. ಈ ಅವಧಿಯೊಳಗೆ ನಿಯಮ ಪಾಲನೆ ಮಾಡಿದ್ದೇ ಆದಲ್ಲಿ, ನಿಯಮಗಳ ಉಲ್ಲಂಘನೆಗಾಗಿ ನೀಡಬೇಕಿದ್ದ ಪರಿಹಾರವನ್ನು ಮನ್ನಾ ಮಾಡಲಾಗುವುದು’ ಎಂದೂ ನ್ಯಾಯಪೀಠ ಹೇಳಿತು.</p>.<p>ಕೋವಿಡ್–19 ಪಿಡುಗಿನ ಹಿನ್ನೆಲೆಯಲ್ಲಿ ಬಿಎಂಸಿ, ಪಿಬಿಆರ್ಗಳ ರಚನೆ ಸಾಧ್ಯವಾಗಿಲ್ಲ. ಇದಕ್ಕಾಗಿ ಸಮಯ ನೀಡಬೇಕು. ನಿಯಮಗಳ ಉಲ್ಲಂಘನೆಗಾಗಿ ಪಾವತಿಸಬೇಕಾಗಿರುವ ಪರಿಹಾರವನ್ನು ಸಹ ಮನ್ನಾ ಮಾಡುವಂತೆ ಕೆಲವು ರಾಜ್ಯಗಳು ಮನವಿ ಮಾಡಿದ್ದವು. ನ್ಯಾಯಪೀಠ ಈ ಮನವಿಯನ್ನು ಪುರಸ್ಕರಿಸಿ ಆದೇಶ ಹೊರಡಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>