ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ಕಾಯ್ದೆಯ ರದ್ದತಿಯನ್ನು ಗಂಭೀರ ವಿಚಾರ ಎಂದು ಕರೆದ ಅವರು, ಸಂಸತ್ತಿನಲ್ಲಿ ಜಾರಿಯಾಗುವ ಕಾನೂನುಗಳು ಜನರ ಇಚ್ಛೆಯನ್ನು ಪ್ರತಿಬಿಂಬಿಸುತ್ತವೆ. ಜನರ ಇಚ್ಛೆಯನ್ನು ಸುಪ್ರೀಂ ಕೋರ್ಟ್ ಅಲ್ಲಗಳೆದಿದೆ. ಈ ರೀತಿಯ ಮತ್ತೊಂದು ನಿದರ್ಶನ ಪ್ರಪಂಚದಲ್ಲಿ ಇನ್ನೊಂದಿಲ್ಲ ಎಂದು ಹೇಳಿದರು.