ನನ್ನ ಕನಸಿನಲ್ಲಿ ಶ್ರೀಕೃಷ್ಣ ಪರಮಾತ್ಮ ಕಾಣಿಸಿಕೊಂಡು ರಾಜ್ಯದಲ್ಲಿ ಮುಂದಿನ ಸರ್ಕಾರವನ್ನು ರಚಿಸುವುದಾಗಿ ಮತ್ತು 'ರಾಮ ರಾಜ್ಯ' ಸ್ಥಾಪಿಸುವುದಾಗಿ ಹೇಳಿದ್ದರು ಎಂದು ಕೆಲ ವಾರಗಳ ಹಿಂದೆ ಅಖಿಲೇಶ್ ಯಾದವ್ ಹೇಳಿದ್ದರು. ಅಖಿಲೇಶ್ ಅವರ ಕನಸಿನ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ್ದ ಆದಿತ್ಯನಾಥ್, ‘ಅಧಿಕಾರದಲ್ಲಿದ್ದಾಗ ಭಯೋತ್ಪಾದಕರನ್ನು ಜೈಲಿನಿಂದ ಬಿಡುಗಡೆ ಮಾಡುವಾಗ ಶ್ರೀಕೃಷ್ಣ ಅವರನ್ನು (ಸಮಾಜವಾದಿ ಪಕ್ಷ) ಶಪಿಸಿರಬೇಕು’ಎಂದು ಕುಟುಕಿದ್ದರು.