ಈ ಸಂಬಂಧ ಮಧ್ಯಪ್ರದೇಶ ಹೈಕೋರ್ಟ್ನ 2018ರ ಆದೇಶವನ್ನೂ ಉಲ್ಲೇಖಿಸಿರುವ ಕೌರ್ ಅವರು, ‘ಕೇಂದ್ರ, ರಾಜ್ಯ ಸರ್ಕಾರಗಳು ಮತ್ತು ಅದರ ಅಧೀನದಲ್ಲಿ ಕಾರ್ಯನಿರ್ವಹಿಸುವ ವಿಭಾಗಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ಸಮುದಾಯದ ಸದಸ್ಯರಿಗೆ ‘ದಲಿತ’ ಎನ್ನುವ ಪದ ಬಳಸಬಾರದು. ಈ ಪದದ ಬಳಕೆಯು ಸಂವಿಧಾನದಲ್ಲಾಗಲೀ ಅಥವಾ ಯಾವುದೇ ಶಾಸನದಲ್ಲಾಗಲೀ ಕಂಡು ಬರುವುದಿಲ್ಲ ಎಂದು ಹೇಳಿದ್ದ ಹೈಕೋರ್ಟ್ ಆ ಪದವನ್ನು ನಿಷೇಧಿಸಲು ಸೂಚಿಸಿತ್ತು’ ಎಂದು ವಿವರಿಸಿದ್ದಾರೆ.