‘ಭಾರತವು ಆಗಸ್ಟ್ ತಿಂಗಳು (ಅಮೃತ ಮಹೋತ್ಸವ ಪ್ರಾರಂಭ) ಪ್ರವೇಶಿಸುತ್ತಿದ್ದಂತೆ ಹಲವು ಮಹತ್ವದ ಘಟನೆಗಳು ನಡೆದಿವೆ.ದಾಖಲೆ ಪ್ರಮಾಣದಲ್ಲಿ ಲಸಿಕೆ ವಿತರಣೆ, ಜಿಎಸ್ಟಿ ಸಂಗ್ರಹದಲ್ಲಿ ಹೆಚ್ಚಳ ಸೇರಿದಂತೆ ಇತರೆ ಬೆಳವಣಿಗೆಗಳು ಭಾರತೀಯರಿಗೆ ಹರ್ಷ ತಂದುಕೊಟ್ಟಿದೆ. ಅಲ್ಲದೆ ಇದು ದೇಶದ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆ ಎಂಬುದನ್ನು ಸೂಚಿಸುತ್ತದೆ’ ಎಂದು ಅವರು ಟ್ವೀಟ್ ಮೂಲಕ ಹರ್ಷ ವ್ಯಕ್ತಪಡಿಸಿದರು.