‘ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ಅವರಿಗೆ ನಮನ ಸಲ್ಲಿಸುತ್ತೇನೆ. ಶಿವಾಜಿ ಮಹಾರಾಜ್ ಅವರ ಅತ್ಯುತ್ತಮ ನಾಯಕತ್ವ, ಅವರು ಸಾಮಾಜಿಕ ಕಲ್ಯಾಣಕ್ಕೆ ನೀಡಿದ ಒತ್ತು ತಲೆಮಾರುಗಳಿಂದ ಜನರಿಗೆ ಪ್ರೇರಣೆಯಾಗಿದೆ. ಸತ್ಯ ಮತ್ತು ನ್ಯಾಯದ ಮೌಲ್ಯದ ಪರವಾಗಿ ನಿಲ್ಲಬೇಕಾದ ಸಂದರ್ಭಗಳಲ್ಲಿ ಅವರು ಯಾವತ್ತೂ ರಾಜಿ ಮಾಡಿಕೊಂಡಿರಲಿಲ್ಲ. ಅವರ ಆಶಯಗಳನ್ನು ಈಡೇರಿಸಲು ನಾವು ಬದ್ಧರಾಗಿದ್ದೇವೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.