1960ರಲ್ಲಿ ತಮ್ಮ ಕವಿತೆಗಳಿಂದ ಪ್ರವರ್ಧಮಾನಕ್ಕೆ ಬಂದಿದ್ದ ಸುಗತಕುಮಾರಿ, ನಂತರ ದಿನಗಳಲ್ಲಿ ಪರಿಸರವಾದಿಯಾಗಿ ಗುರುತಿಸಿಕೊಂಡಿದ್ದರು. 2006ರಲ್ಲಿ ಸುಗತ ಅವರಿಗೆ ಭಾರತ ಸರ್ಕಾರದ ಪದ್ಮಶ್ರೀ ಪುರಸ್ಕಾರ ದೊರೆತಿತ್ತು. ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯ ನಾಶವಾಗದಂತೆ ತಡೆಯಲು ‘ಸೇವ್ ಸೈಲೆಂಟ್ ವ್ಯಾಲಿ’ ಚಳವಳಿಯ ನೇತೃತ್ವವನ್ನು ಸುಗತಕುಮಾರಿ ವಹಿಸಿಕೊಂಡಿದ್ದರು. ನಿರ್ಗತಿಕ ಮಹಿಳೆಯರು–ಮಕ್ಕಳು ಹಾಗೂ ಮಾನಸಿಕ ಅಸ್ವಸ್ಥರಾಗಿ ಅವರು ಅಭಯ ಮತ್ತು ಅಥಾನಿ ಹೆಸರಿನಲ್ಲಿ ಸಾಮಾಜಿಕ ಕಲ್ಯಾಣ ಕಾರ್ಯಗಳನ್ನೂ ಕೈಗೊಂಡಿದ್ದರು. ಕೇರಳ ಮಹಿಳಾ ಆಯೋಗದ ಅಧ್ಯಕ್ಷೆಯಾಗಿಯೂ ಕಾರ್ಯ ನಿರ್ವಹಿಸಿದ್ದರು.