ಮೀನಾಚಿಲ್ ನದಿಯ ಸಂರಕ್ಷಣೆಯ ಹೊಣೆಯನ್ನು ತನಗೆ ನೀಡುವಂತೆ ಸಂಘಟನೆಯೊಂದು ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಈ ಅರ್ಜಿಯನ್ನು ತಿರಸ್ಕರಿಸಿದ ಮುಖ್ಯ ನ್ಯಾಯಮೂರ್ತಿ ಎಸ್.ಮಣಿಕುಮಾರ್ ಮತ್ತು ನ್ಯಾಯಮೂರ್ತಿ ಶಾಜಿ ಪಿ.ಚಾಳೆ ಅವರನ್ನು ಒಳಗೊಂಡ ಪೀಠವು, ನದಿಯ ನಿರ್ವಹಣೆಯ ಜೊತೆಗೆ ಅತಿಕ್ರಮಣವನ್ನು ತೆರವುಗೊಳಿಸುವಂತೆ ಸರ್ಕಾರ ಮತ್ತು ಕೊಟ್ಟಾಯಂನ ಮೂರು ಪುರಸಭೆಗಳಿಗೆ ನಿರ್ದೇಶಿಸಿದೆ.