<p><strong>ಮಲಪ್ಪುರಂ:</strong> 'ಶಾಲೆಯಲ್ಲಿ ನಿಮಗಿಂತ ಎತ್ತರವಾಗಿರುವವನು ನಿಮ್ಮನ್ನು ಭಯ ಪಡಿಸಲು ಪ್ರಯತ್ನಿಸಿರಬಹುದು. ನೀವು ಹೆದರಿಕೊಂಡಿರುವ ವರೆಗೂ ನಿಮ್ಮನ್ನು ಭಯ ಪಡಿಸುತ್ತಾನೆ. ನೀವು ಧೈರ್ಯದಿಂದ ಎದುರು ನಿಂತಾಗ ಆತನೇ ಭಯಗೊಳ್ಳುತ್ತಾನೆ' ಎಂಬ ಉದಾಹರಣೆಯನ್ನು ಕೊಟ್ಟ ರಾಹುಲ್ ಗಾಂಧಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.</p>.<p>'ದಿಲ್ಲಿಯಲ್ಲಿ ಅಧಿಕಾರದಲ್ಲಿರುವ ಮಂದಿಯ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ. ಅವರು ಹೇಡಿಗಳು. ನಾನು ಅವರನ್ನು ಎದುರಿಸಿದ್ದೇನೆ. ಮುಂದೆಯೂ ಅವರನ್ನು ಎದುರಿಸುತ್ತೇನೆ. ಅವರು ಸ್ವತಃ ಭಯ ಬಿದ್ದಿದ್ದಾರೆ. ಹಾಗಾಗಿ ಅವರು ನಿಮ್ಮನ್ನು ಬೆದರಿಸಲು ಪ್ರಯತ್ನಿಸುತ್ತಿದ್ದಾರೆ' ಎಂದರು.</p>.<p>ಕೇರಳ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಮಲಪ್ಪುರಂನ ಎರ್ನಾಡ್ನಲ್ಲಿರುವ 'ಸುಲ್ಲಮುಸ್ಸಲಮ್ ಆರ್ಟ್ಸ್ ಆ್ಯಂಡ್ ಸೈನ್ಸ್ ಕಾಲೇಜ್'ನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾಡಿದ ಭಾಷಣವನ್ನು ಕಾಂಗ್ರೆಸ್ ಸರಣಿ ಟ್ವೀಟ್ ಮೂಲಕ ಹಂಚಿಕೊಂಡಿದೆ.</p>.<p><a href="https://www.prajavani.net/india-news/congress-tweet-rahul-gandhi-speech-after-indications-of-its-loss-in-five-state-assembly-elections-918056.html" itemprop="url">ಕ್ರೀಡೆ, ಸ್ಪರ್ಧೆ ಹಾಗೂ ಹೋರಾಟದ ಬಗ್ಗೆ ರಾಹುಲ್ ಭಾಷಣ </a></p>.<p>'ಭಯ ಒಂದು ಆಯ್ಕೆ. ಯಾವುದಕ್ಕಾದರೂ ಭಯಗೊಂಡರೆ, ನಾವು ಭಯ ಪಡುವುದನ್ನು ಆಯ್ಕೆ ಮಾಡಿಕೊಂಡಿದ್ದೇವೆ ಎಂದರ್ಥ. ನಾವು ಭೀತಿಗೆ ಒಳಗಾಗುವುದನ್ನು ಪ್ರಜ್ಞಾಪೂರ್ವಕವಾಗಿ ನಿರ್ಧರಿಸುತ್ತೇವೆ. ಆದರೆ ಮತ್ತೊಂದು ಆಯ್ಕೆಯೂ ಇದೆ. ನೀವು ತಿರುಗಿ ಬೀಳಬಹುದು ಮತ್ತು ಹೆದರಿಕೊಂಡಿಲ್ಲ ಎಂದು ಹೇಳಬಹುದು' ಎಂದು ರಾಹುಲ್ ಹೇಳಿದರು.</p>.<p>ಕೇವಲ ನಾನೊಬ್ಬನೇ ನಿಮ್ಮ ಭರವಸೆಯಲ್ಲ. ಇಲ್ಲಿ ಪ್ರತಿಯೊಬ್ಬರಿಗೂ ಅವರವರೇ ಭರವಸೆಯಾಗಿದ್ದಾರೆ. ಇಲ್ಲಿರುವ ಪ್ರತಿಯೊಬ್ಬರೂ ನನ್ನ ಭರವಸೆ. ನೀವು ತಿರುಗಿ ನಿಂತು ಭಯಗೊಂಡಿಲ್ಲ ಎಂದು ಹೇಳಿದರೆ ರಾಷ್ಟ್ರವು ಉತ್ತಮವಾಗಿರಲಿದೆ. ನೀವು ಯಾವುದಕ್ಕೂ ಭಯಪಡಬೇಕಾಗಿಲ್ಲ' ಎಂದರು.</p>.<p>ಐದು ರಾಜ್ಯಗಳ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದೆ. ಪಂಜಾಬ್ನಲ್ಲಿ ಕಾಂಗ್ರೆಸ್ ಅಧಿಕಾರದಿಂದ ಹೊರಗುಳಿಯುವುದು ಖಚಿತವಾಗಿದೆ. ಉತ್ತರ ಪ್ರದೇಶದಲ್ಲಿ ನೀರಸವಾದ ಪ್ರದರ್ಶನ ತೋರಿದೆ.</p>.<p><a href="https://www.prajavani.net/india-news/assembly-election-result-2022-live-updates-from-uttar-pradesh-uttarakhand-punjab-goa-manipur-918011.html" itemprop="url">Election Results 2022 LIVE | ಪಂಚರಾಜ್ಯ ಚುನಾವಣೆ ಫಲಿತಾಂಶ: ನವಜೋತ್ ಸಿಂಗ್ ಸಿಧುಗೆ ಸೋಲು Live</a><a href="https://www.prajavani.net/india-news/assembly-election-result-2022-live-updates-from-uttar-pradesh-uttarakhand-punjab-goa-manipur-918011.html" itemprop="url"> </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಲಪ್ಪುರಂ:</strong> 'ಶಾಲೆಯಲ್ಲಿ ನಿಮಗಿಂತ ಎತ್ತರವಾಗಿರುವವನು ನಿಮ್ಮನ್ನು ಭಯ ಪಡಿಸಲು ಪ್ರಯತ್ನಿಸಿರಬಹುದು. ನೀವು ಹೆದರಿಕೊಂಡಿರುವ ವರೆಗೂ ನಿಮ್ಮನ್ನು ಭಯ ಪಡಿಸುತ್ತಾನೆ. ನೀವು ಧೈರ್ಯದಿಂದ ಎದುರು ನಿಂತಾಗ ಆತನೇ ಭಯಗೊಳ್ಳುತ್ತಾನೆ' ಎಂಬ ಉದಾಹರಣೆಯನ್ನು ಕೊಟ್ಟ ರಾಹುಲ್ ಗಾಂಧಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.</p>.<p>'ದಿಲ್ಲಿಯಲ್ಲಿ ಅಧಿಕಾರದಲ್ಲಿರುವ ಮಂದಿಯ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ. ಅವರು ಹೇಡಿಗಳು. ನಾನು ಅವರನ್ನು ಎದುರಿಸಿದ್ದೇನೆ. ಮುಂದೆಯೂ ಅವರನ್ನು ಎದುರಿಸುತ್ತೇನೆ. ಅವರು ಸ್ವತಃ ಭಯ ಬಿದ್ದಿದ್ದಾರೆ. ಹಾಗಾಗಿ ಅವರು ನಿಮ್ಮನ್ನು ಬೆದರಿಸಲು ಪ್ರಯತ್ನಿಸುತ್ತಿದ್ದಾರೆ' ಎಂದರು.</p>.<p>ಕೇರಳ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಮಲಪ್ಪುರಂನ ಎರ್ನಾಡ್ನಲ್ಲಿರುವ 'ಸುಲ್ಲಮುಸ್ಸಲಮ್ ಆರ್ಟ್ಸ್ ಆ್ಯಂಡ್ ಸೈನ್ಸ್ ಕಾಲೇಜ್'ನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾಡಿದ ಭಾಷಣವನ್ನು ಕಾಂಗ್ರೆಸ್ ಸರಣಿ ಟ್ವೀಟ್ ಮೂಲಕ ಹಂಚಿಕೊಂಡಿದೆ.</p>.<p><a href="https://www.prajavani.net/india-news/congress-tweet-rahul-gandhi-speech-after-indications-of-its-loss-in-five-state-assembly-elections-918056.html" itemprop="url">ಕ್ರೀಡೆ, ಸ್ಪರ್ಧೆ ಹಾಗೂ ಹೋರಾಟದ ಬಗ್ಗೆ ರಾಹುಲ್ ಭಾಷಣ </a></p>.<p>'ಭಯ ಒಂದು ಆಯ್ಕೆ. ಯಾವುದಕ್ಕಾದರೂ ಭಯಗೊಂಡರೆ, ನಾವು ಭಯ ಪಡುವುದನ್ನು ಆಯ್ಕೆ ಮಾಡಿಕೊಂಡಿದ್ದೇವೆ ಎಂದರ್ಥ. ನಾವು ಭೀತಿಗೆ ಒಳಗಾಗುವುದನ್ನು ಪ್ರಜ್ಞಾಪೂರ್ವಕವಾಗಿ ನಿರ್ಧರಿಸುತ್ತೇವೆ. ಆದರೆ ಮತ್ತೊಂದು ಆಯ್ಕೆಯೂ ಇದೆ. ನೀವು ತಿರುಗಿ ಬೀಳಬಹುದು ಮತ್ತು ಹೆದರಿಕೊಂಡಿಲ್ಲ ಎಂದು ಹೇಳಬಹುದು' ಎಂದು ರಾಹುಲ್ ಹೇಳಿದರು.</p>.<p>ಕೇವಲ ನಾನೊಬ್ಬನೇ ನಿಮ್ಮ ಭರವಸೆಯಲ್ಲ. ಇಲ್ಲಿ ಪ್ರತಿಯೊಬ್ಬರಿಗೂ ಅವರವರೇ ಭರವಸೆಯಾಗಿದ್ದಾರೆ. ಇಲ್ಲಿರುವ ಪ್ರತಿಯೊಬ್ಬರೂ ನನ್ನ ಭರವಸೆ. ನೀವು ತಿರುಗಿ ನಿಂತು ಭಯಗೊಂಡಿಲ್ಲ ಎಂದು ಹೇಳಿದರೆ ರಾಷ್ಟ್ರವು ಉತ್ತಮವಾಗಿರಲಿದೆ. ನೀವು ಯಾವುದಕ್ಕೂ ಭಯಪಡಬೇಕಾಗಿಲ್ಲ' ಎಂದರು.</p>.<p>ಐದು ರಾಜ್ಯಗಳ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದೆ. ಪಂಜಾಬ್ನಲ್ಲಿ ಕಾಂಗ್ರೆಸ್ ಅಧಿಕಾರದಿಂದ ಹೊರಗುಳಿಯುವುದು ಖಚಿತವಾಗಿದೆ. ಉತ್ತರ ಪ್ರದೇಶದಲ್ಲಿ ನೀರಸವಾದ ಪ್ರದರ್ಶನ ತೋರಿದೆ.</p>.<p><a href="https://www.prajavani.net/india-news/assembly-election-result-2022-live-updates-from-uttar-pradesh-uttarakhand-punjab-goa-manipur-918011.html" itemprop="url">Election Results 2022 LIVE | ಪಂಚರಾಜ್ಯ ಚುನಾವಣೆ ಫಲಿತಾಂಶ: ನವಜೋತ್ ಸಿಂಗ್ ಸಿಧುಗೆ ಸೋಲು Live</a><a href="https://www.prajavani.net/india-news/assembly-election-result-2022-live-updates-from-uttar-pradesh-uttarakhand-punjab-goa-manipur-918011.html" itemprop="url"> </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>