<p><strong>ಮಂಗಳೂರು</strong>: ದೇವಸ್ಥಾನದ ಅರ್ಚಕ ರೊಬ್ಬರ ಐದು ವರ್ಷ ವಯಸ್ಸಿನ ಮಗುವಿಗೆ ಅಸ್ಥಿ ಮಜ್ಜೆ ಟ್ರಾನ್ಸ್ಪ್ಲಾಂಟ್ ಚಿಕಿತ್ಸೆಗಾಗಿ ಕೇವಲ 15 ಗಂಟೆಗಳಲ್ಲಿ ₹75 ಲಕ್ಷ ನೆರವು ಸಂಗ್ರಹಿಸುವ ಮೂಲಕ ಸಮಾಜ ಸೇವಕ ಬಂಟ್ವಾಳದ ಫಯಾಜ್ ಮಸೂದ್ ಹಾಗೂ ಅವರ ತಂಡ ಕರಾವಳಿಯ ಸೌಹಾರ್ದ ಪರಂಪರೆಗೆ ಸಾಕ್ಷಿ ಒದಗಿಸಿದೆ.</p><p>ಬಂಟ್ವಾಳ ತಾಲ್ಲೂಕಿನ ಐದು ವರ್ಷ ವಯಸ್ಸಿನ ಹೆಣ್ಣು ಮಗುವಿಗೆ ತುರ್ತಾಗಿ ಅಸ್ಥಿ ಮಜ್ಜೆ ಟ್ರಾನ್ಸ್ಪ್ಲಾಂಟ್ ಮಾಡಿಸಬೇಕು ಎಂದು ಬೆಂಗಳೂರಿನ ನಾರಾಯಣ ಆರೋಗ್ಯ ಸಂಸ್ಥೆಯ ವೈದ್ಯರು ಸೂಚಿಸಿದ್ದರು. ಇದಕ್ಕೆ ಸುಮಾರು ₹40 ಲಕ್ಷದಿಂದ ₹50 ಲಕ್ಷದಷ್ಟು ವೆಚ್ಚ ಬರಬಹುದು ಎಂದು ತಿಳಿಸಿದ್ದರು. ಮಗುವಿನ ಚಿಕಿತ್ಸೆಗಾಗಿ ಈಗಾಗಲೇ ಸುಮಾರು ₹7 ಲಕ್ಷದಷ್ಟು ಹಣ ವೆಚ್ಚ ಮಾಡಿರುವ ಕುಟುಂಬಕ್ಕೆ ಇಷ್ಟೊಂದು ಹಣ ಹೊಂದಿಸುವುದು ಅಸಾಧ್ಯವಾಗಿತ್ತು.</p><p>‘ನಮ್ಮ ಕಷ್ಟವನ್ನು ಅರಿತ ಸ್ನೇಹಿತರೊಬ್ಬರು ಫಯಾಜ್ ಅವರ ನಂಬರ್ ಕೊಟ್ಟಿದ್ದರು. ಗ್ರಾಮದ 10 ಮಂದಿ ಹೋಗಿ ಅವರನ್ನು ಭೇಟಿಯಾದೆವು. ಅದಾದ ಬಳಿಕ ಅವರು ನಮ್ಮ ಮನೆಗೆ ಬಂದು, ಮಗಳನ್ನು ಭೇಟಿಮಾಡಿ, ವಿಡಿಯೊ ಮಾಡಿಕೊಂಡರು. ಮರುದಿನ ಸಂಜೆ 6 ಗಂಟೆಗೆ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸುವುದಾಗಿ ತಿಳಿಸಿದರು. ಆದರೆ ಈ ಪ್ರಮಾಣದಲ್ಲಿ ನೆರವು ಲಭಿಸುತ್ತದೆ ಎಂದು ಭಾವಿಸಿರಲಿಲ್ಲ’ ಎಂದು ಬಾಲಕಿಯ ತಂದೆ ಹಿರಣ್ಯಾಕ್ಷ ತಿಳಿಸಿದರು.</p><p>‘ಕಟುಂಬದವರ ಸಂಕಷ್ಟವನ್ನು ಮನಗಂಡು, ಜೂನ್ 30ರಂದು ಸಂಜೆ 6 ಗಂಟೆ ವೇಳೆಗೆ ನಾನು ನೆರವು ಯಾಚಿಸಿ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಪೋಸ್ಟ್ ಮಾಡಿದ್ದೆ. ಮರುದಿನ ಬೆಳಿಗ್ಗೆ 10.30ರ ವೇಳೆಗೆ ₹75 ಲಕ್ಷ ಸಂಗ್ರಹವಾಗಿತ್ತು’ ಎಂದು ಫಯಾಜ್ಪ್ರತಿಕ್ರಿಯಿಸಿದ್ದಾರೆ.</p><p>‘ಅವರು ನಮ್ಮ ಧರ್ಮ ನೋಡಲಿಲ್ಲ, ನಮ್ಮಿಂದ ಏನನ್ನೂ ಕೇಳಿಲ್ಲ, ಬದಲಿಗೆ ಎಷ್ಟು ದಿನದೊಳಗೆ ನಿಮಗೆ ಹಣ ಬೇಕಾಗಿದೆ ಎಂದಷ್ಟೇ ಕೇಳಿದ್ದರು’ ಎಂದು ಹಿರಣ್ಯಾಕ್ಷ ತಿಳಿಸಿದರು.</p><p>ಮಗುವಿನ ಕುಟುಂಬದವರು ಈಗಾಗಲೇ ಬೆಂಗಳೂರಿಗೆ ತೆರಳಿದ್ದು, ಒಂದೆರಡು ದಿನಗಳಲ್ಲಿ ಚಿಕಿತ್ಸೆ ಆರಂಭವಾಗುವ ನಿರೀಕ್ಷೆ ಇದೆ ಎಂದು ತಿಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು</strong>: ದೇವಸ್ಥಾನದ ಅರ್ಚಕ ರೊಬ್ಬರ ಐದು ವರ್ಷ ವಯಸ್ಸಿನ ಮಗುವಿಗೆ ಅಸ್ಥಿ ಮಜ್ಜೆ ಟ್ರಾನ್ಸ್ಪ್ಲಾಂಟ್ ಚಿಕಿತ್ಸೆಗಾಗಿ ಕೇವಲ 15 ಗಂಟೆಗಳಲ್ಲಿ ₹75 ಲಕ್ಷ ನೆರವು ಸಂಗ್ರಹಿಸುವ ಮೂಲಕ ಸಮಾಜ ಸೇವಕ ಬಂಟ್ವಾಳದ ಫಯಾಜ್ ಮಸೂದ್ ಹಾಗೂ ಅವರ ತಂಡ ಕರಾವಳಿಯ ಸೌಹಾರ್ದ ಪರಂಪರೆಗೆ ಸಾಕ್ಷಿ ಒದಗಿಸಿದೆ.</p><p>ಬಂಟ್ವಾಳ ತಾಲ್ಲೂಕಿನ ಐದು ವರ್ಷ ವಯಸ್ಸಿನ ಹೆಣ್ಣು ಮಗುವಿಗೆ ತುರ್ತಾಗಿ ಅಸ್ಥಿ ಮಜ್ಜೆ ಟ್ರಾನ್ಸ್ಪ್ಲಾಂಟ್ ಮಾಡಿಸಬೇಕು ಎಂದು ಬೆಂಗಳೂರಿನ ನಾರಾಯಣ ಆರೋಗ್ಯ ಸಂಸ್ಥೆಯ ವೈದ್ಯರು ಸೂಚಿಸಿದ್ದರು. ಇದಕ್ಕೆ ಸುಮಾರು ₹40 ಲಕ್ಷದಿಂದ ₹50 ಲಕ್ಷದಷ್ಟು ವೆಚ್ಚ ಬರಬಹುದು ಎಂದು ತಿಳಿಸಿದ್ದರು. ಮಗುವಿನ ಚಿಕಿತ್ಸೆಗಾಗಿ ಈಗಾಗಲೇ ಸುಮಾರು ₹7 ಲಕ್ಷದಷ್ಟು ಹಣ ವೆಚ್ಚ ಮಾಡಿರುವ ಕುಟುಂಬಕ್ಕೆ ಇಷ್ಟೊಂದು ಹಣ ಹೊಂದಿಸುವುದು ಅಸಾಧ್ಯವಾಗಿತ್ತು.</p><p>‘ನಮ್ಮ ಕಷ್ಟವನ್ನು ಅರಿತ ಸ್ನೇಹಿತರೊಬ್ಬರು ಫಯಾಜ್ ಅವರ ನಂಬರ್ ಕೊಟ್ಟಿದ್ದರು. ಗ್ರಾಮದ 10 ಮಂದಿ ಹೋಗಿ ಅವರನ್ನು ಭೇಟಿಯಾದೆವು. ಅದಾದ ಬಳಿಕ ಅವರು ನಮ್ಮ ಮನೆಗೆ ಬಂದು, ಮಗಳನ್ನು ಭೇಟಿಮಾಡಿ, ವಿಡಿಯೊ ಮಾಡಿಕೊಂಡರು. ಮರುದಿನ ಸಂಜೆ 6 ಗಂಟೆಗೆ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸುವುದಾಗಿ ತಿಳಿಸಿದರು. ಆದರೆ ಈ ಪ್ರಮಾಣದಲ್ಲಿ ನೆರವು ಲಭಿಸುತ್ತದೆ ಎಂದು ಭಾವಿಸಿರಲಿಲ್ಲ’ ಎಂದು ಬಾಲಕಿಯ ತಂದೆ ಹಿರಣ್ಯಾಕ್ಷ ತಿಳಿಸಿದರು.</p><p>‘ಕಟುಂಬದವರ ಸಂಕಷ್ಟವನ್ನು ಮನಗಂಡು, ಜೂನ್ 30ರಂದು ಸಂಜೆ 6 ಗಂಟೆ ವೇಳೆಗೆ ನಾನು ನೆರವು ಯಾಚಿಸಿ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಪೋಸ್ಟ್ ಮಾಡಿದ್ದೆ. ಮರುದಿನ ಬೆಳಿಗ್ಗೆ 10.30ರ ವೇಳೆಗೆ ₹75 ಲಕ್ಷ ಸಂಗ್ರಹವಾಗಿತ್ತು’ ಎಂದು ಫಯಾಜ್ಪ್ರತಿಕ್ರಿಯಿಸಿದ್ದಾರೆ.</p><p>‘ಅವರು ನಮ್ಮ ಧರ್ಮ ನೋಡಲಿಲ್ಲ, ನಮ್ಮಿಂದ ಏನನ್ನೂ ಕೇಳಿಲ್ಲ, ಬದಲಿಗೆ ಎಷ್ಟು ದಿನದೊಳಗೆ ನಿಮಗೆ ಹಣ ಬೇಕಾಗಿದೆ ಎಂದಷ್ಟೇ ಕೇಳಿದ್ದರು’ ಎಂದು ಹಿರಣ್ಯಾಕ್ಷ ತಿಳಿಸಿದರು.</p><p>ಮಗುವಿನ ಕುಟುಂಬದವರು ಈಗಾಗಲೇ ಬೆಂಗಳೂರಿಗೆ ತೆರಳಿದ್ದು, ಒಂದೆರಡು ದಿನಗಳಲ್ಲಿ ಚಿಕಿತ್ಸೆ ಆರಂಭವಾಗುವ ನಿರೀಕ್ಷೆ ಇದೆ ಎಂದು ತಿಳಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>