2018ರಲ್ಲಿ ಬಿಜೆಪಿ ತ್ಯಜಿಸುವ ಮುನ್ನ ಆಗಿನ ವಸುಂಧರಾ ರಾಜೆ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ತಿವಾರಿ ಭಿನ್ನಾಭಿಪ್ರಾಯ ಹೊಂದಿದ್ದರು. ಬಳಿಕ ರಾಜಸ್ಥಾನ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ‘ಭಾರತ್ ವಾಹಿನಿ ಪಕ್ಷ’ ಸ್ಥಾಪಿಸಿದ್ದರು. ಸಂಗಾನೆರ್ ಕ್ಷೇತ್ರದಿಂದ ವಿಧಾನಸಭೆ ಚುನಾವಣೆ ಸ್ಪರ್ಧಿಸಿದ್ದ ಅವರು ಸೋಲನುಭವಿಸಿದ್ದರು.