ಜಾಗತಿಕ ಸಮೃದ್ಧಿಗಾಗಿ ಸೂಪರ್ ಪವರ್ ಆಗಲು ಭಾರತ ಬಯಸುತ್ತಿದೆ. ಆದರೆ, ಬೇರೊಂದು ದೇಶದ ಮೇಲೆ ದಬ್ಬಾಳಿಕೆ ನಡೆಸಲು ಅಥವಾ ಒಂದು ಇಂಚಿನಷ್ಟಾದರೂ ನೆಲವನ್ನು ಕಬಳಿಸಲು ಭಾರತ ಬಯಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಗಡಿಯಲ್ಲಿ ಚೀನಾ ನಡೆಸುತ್ತಿರುವ ಅತಿಕ್ರಮಣವನ್ನು ಪರೋಕ್ಷವಾಗಿ ಉಲ್ಲೇಖಿಸಿ ಅವರು ಹೀಗೆ ಹೇಳಿದ್ದಾರೆ.