ಅಲೋಪತಿ ಔಷಧದ ಕುರಿತು ರಾಮ್ದೇವ್ ನೀಡಿದ ಹೇಳಿಕೆ ವಿರೋಧಿಸಿ, ಅವರ ವಿರುದ್ಧ ಛತ್ತೀಸ್ಗಡ ಮತ್ತು ಬಿಹಾರ ರಾಜ್ಯದ ಭಾರತೀಯ ವೈದ್ಯಕೀಯ ಸಂಘ ದೂರು ನೀಡಿತ್ತು. ಈ ಸಂಬಂಧ ರಾಮ್ದೇವ್ ವಿರುದ್ಧ ಹಲವು ಎಫ್ಐಆರ್ ಗಳು ದಾಖಲಾಗಿವೆ. ಎಫ್ಐಆರ್ಗಳಿಗೆ ತಡೆ ನೀಡುವಂತೆ ಕೋರಿ ರಾಮ್ದೇವ್ ಅವರು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯ ಬುಧವಾರ ಈ ಅರ್ಜಿಯ ವಿಚಾರಣೆ ನಡೆಸಿತು.