ನದೀಮ್ ಅಲಿ ಎಂಬುವವರು ನೀಡಿರುವ ದೂರಿನ ಮೇರೆಗೆ ಧರ್ಮ ಸಂಸತ್ ಕಾರ್ಯಕ್ರಮ ಆಯೋಜಕರಾದ ಯತಿ ನರಸಿಂಹಾನಂದ ಗಿರಿ, ವಾಸಿಂ ರಿಜ್ವಿ (ಜಿತೇಂದ್ರ ನಾರಾಯಣ ತ್ಯಾಗಿ), ಸಿಂಧು ಸಾಗರ್, ಧರ್ಮದಾಸ್, ಪರಮಾನಂದ, ಸಾಧ್ವಿ ಅನ್ನಪೂರ್ಣ, ಆನಂದ ಸ್ವರೂಪ, ಅಶ್ವಿನಿ ಉಪಾಧ್ಯಾಯ, ಸುರೇಶ್ ಚೌಹಾಣ್ ಮತ್ತು ಪ್ರಬೋಧಾನಂದ ಗಿರಿ ವಿರುದ್ಧ ಹರಿದ್ವಾರದ ಜ್ವಾಲಾಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.