ಟ್ರಸ್ಟ್ ಪರ ವಕೀಲ ಅರವಿಂದ್ ದತ್ತರ್ ಅವರು, ‘ರಾಜಮನೆತನದ ಸಾರ್ವಜನಿಕ ಟ್ರಸ್ಟ್, ಆಡಳಿತದಲ್ಲಿ ಯಾವುದೇ ಪಾತ್ರವನ್ನು ಹೊಂದಿಲ್ಲ. ಈ ಬಗ್ಗೆ ಅರ್ಜಿಯಲ್ಲಿ ಪ್ರಸ್ತಾಪಿಸಿಲ್ಲ. ರಾಜಮನೆತನವನ್ನು ಒಳಗೊಂಡ ಪೂಜೆ ಮತ್ತು ಆಚರಣೆಗಳ ಮೇಲೆ ನಿಗಾವಹಿಸಲು ಟ್ರಸ್ಟ್ ಅನ್ನು ರಚಿಸಲಾಗಿದೆ. ಅಮಿಕಸ್ ಕ್ಯೂರಿ (ಕೋರ್ಟ್ಗೆ ಸಹಕರಿಸುವ ವಕೀಲ) ಟ್ರಸ್ಟ್ನ ಖಾತೆಗಳನ್ನು ಲೆಕ್ಕ ಪರಿಶೋಧನೆ ಮಾಡಬೇಕೆಂದು ಹೇಳಿದ್ದಾರೆ. ಆದರೆ ದೇವಸ್ಥಾನ ಮತ್ತು ಟ್ರಸ್ಟ್ ಪ್ರತ್ಯೇಕವಾಗಿರುವುದರಿಂದ ಇದರ ಅವಶ್ಯಕತೆಯಿಲ್ಲ’ ಎಂದು ವಾದಿಸಿದರು.