ಬಿಜೆಪಿ ಸ್ಥಾಪಕರ ಸಿದ್ಧಾಂತಗಳನ್ನು ರೂಢಿಗೊಳಿಸುವಂತೆ ಯುವ ಕಾರ್ಯಕರ್ತರಿಗೆ ಕರೆ ನೀಡಿದ ಯೋಗಿ ಆದಿತ್ಯನಾಥ್, ಆಯೋಧ್ಯೆಯಿಂದ ಬೃಜಭೂಮಿವರೆಗೆ ಹಾಗೂ ಖುಷಿನಗರದಿಂದ ಸಾರಾನಾಥದ ವರೆಗೆ, ಇಡೀ ಉತ್ತರ ಪ್ರದೇಶವು ಬಲಿದಾನದ ಭೂಮಿಯಾಗಿದೆ. ಉತ್ತರ ಪ್ರದೇಶದ ಯುವಕರು ಇತಿಹಾಸ ನಿರ್ಮಿಸುತ್ತಾರೆ ಮತ್ತು ಸೃಷ್ಟಿಸುತ್ತಾರೆ ಎಂದರು.
ದೇಶ ವಿಭಜನೆಯ ದುರಂತದ ಬಗ್ಗೆ ಹೊಸ ಪೀಳಿಗೆಗೆ ಅರಿವು ಮೂಡಿಸುವ ಕೆಲಸಗಳಾಗಬೇಕು ಎಂದು ಕರೆ ನೀಡಿದ ಯೋಗಿ ಆದಿತ್ಯನಾಥ್ ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದರು. ಪ್ರತಿಪಕ್ಷಗಳಿಗೂ ಯುವ ಘಟಕಗಳಿವೆ. ಆದರೆ ಸಾರ್ವಜನಿಕವಾಗಿ ಎಂತಹ ವರ್ಚಸ್ಸು ಅವುಗಳಿಗಿದೆ? ಅವುಗಳಲ್ಲಿ ಇರುವುದು ಅರಾಜಕತೆ, ಬೆಂಕಿ ಹಚ್ಚುವುದು ಮತ್ತು ಲೂಟಿ ಮಾಡುವ ಸಂಸ್ಕೃತಿ. ಆದರೆ ಬಿಜೆಪಿಯ ಜೊತೆಗಿರುವ ಯುವ ಘಟಕಕ್ಕೆ ರಾಷ್ಟ್ರೀಯತೆ, ಧನಾತ್ಮಕ ಮನೋಭಾವ ಮತ್ತು ಅಭಿವೃದ್ಧಿಯ ಚಿಂತನೆಯಿದೆ ಎಂದರು.