<p><strong>ನವದೆಹಲಿ:</strong> ಕೋವಿಡ್-19 ನಂತರದ ಜಗತ್ತು ರೂಪಿಸುವಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾದ ಪ್ರಬಲ ಸಹಭಾಗಿತ್ವವು ಪ್ರಮುಖ ಪಾತ್ರ ವಹಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.</p>.<p>ಹಾಗೆಯೇ ಸರ್ಕ್ಯುಲರ್ ಎಕಾನಮಿಯ (ಚಕ್ರೀಯ ಅರ್ಥವ್ಯವಸ್ಥೆ) ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಉಭಯ ದೇಶಗಳು ಮುಂದಾಗಲಿವೆ ಎಂದು ಭರವಸೆ ವ್ಯಕ್ತಪಡಿಸಿದರು.</p>.<p>ಭಾರತ-ಆಸ್ಟ್ರೇಲಿಯಾ ಸರ್ಕ್ಯುಲರ್ ಎಕಾನಮಿ ಹ್ಯಾಕಥಾನ್ ಕಾರ್ಖವೈಖರಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಬಳಕೆ ಆಧಾರಿತ ಅರ್ಥವ್ಯವಸ್ಥೆ ಮಾದರಿಗಳು ಜಗತ್ತಿನ ಮೇಲೆ ಹೆಚ್ಚಿನ ಒತ್ತಡವನ್ನು ಬೀರಿವೆ ಎಂದರು.</p>.<p>ಭೂತಾಯಿ ನೀಡುವ ಎಲ್ಲ ಸಂಪತ್ತಿಗೂ ನಾವು ಮಾಲೀಕರಲ್ಲ ಎಂಬುದನ್ನು ಎಂದಿಗೂ ಮರೆಯಬಾರದು. ನಾವು ಮುಂದಿನ ಪೀಳಿಗೆಯ ಪರಿಪಾಲಕರಾಗಿದ್ದೇವೆ ಎಂದು ತಿಳಿಸಿದರು.</p>.<p>ಉತ್ಪಾದನಾ ಪ್ರಕ್ರಿಯೆಗಳನ್ನು ಹೆಚ್ಚು ಪರಿಣಾಮಕಾರಿ ಹಾಗೂ ಕಡಿಮೆ ಮಾಲಿನ್ಯಕಾರಕವಾಗಿಸುವುದು ಮಾತ್ರ ಪರಿಹಾರವಲ್ಲ ಎಂಬುದನ್ನು ಪ್ರಧಾನಿ ಮೋದಿ ಒತ್ತಿ ಹೇಳಿದರು. ನಾವು ಎಷ್ಟೇ ವೇಗವಾಗಿ ಅಥವಾ ನಿಧಾನವಾಗಿ ಸಾಗಿದರೂ ಗುರಿ ತಪ್ಪಾಗಿದ್ದರೆ, ತಪ್ಪಾದ ಗಮ್ಯ ಸ್ಥಾನವನ್ನೇ ತಲುಪಲಿದ್ದೇವೆ. ಈ ನಿಟ್ಟಿನಲ್ಲಿ ಸರಿಯಾದ ದಿಶೆಯನ್ನು ಹೊಂದಿರಬೇಕು ಎಂದು ಹೇಳಿದರು.</p>.<p>ಇದನ್ನೂ ಓದಿ:<a href="https://www.prajavani.net/india-news/shah-promises-to-put-gangasagar-on-international-tourist-map-806519.html" itemprop="url">ಅಂತರರಾಷ್ಟ್ರೀಯ ಪ್ರವಾಸಿ ನಕ್ಷೆಗೆ ಗಂಗಾಸಾಗರ್ ಸೇರ್ಪಡೆ: ಅಮಿತ್ ಶಾ ಭರವಸೆ </a></p>.<p>ಅನೇಕ ಸವಾಲುಗಳಿಗೆ ಪರಿಹಾರ ಕಲ್ಪಿಸುವಲ್ಲಿ ಸರ್ಕ್ಯುಲರ್ ಎಕಾನಮಿ ಅನುಸರಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು. ವಸ್ತುಗಳ ಮರು ಬಳಕೆ, ತ್ಯಾಜ್ಯವನ್ನು ಹೋಗಲಾಡಿಸುವುದು, ಸಂಪನ್ಮೂಲ ದಕ್ಷತೆಯನ್ನು ಸುಧಾರಿಸುವುದು ನಮ್ಮ ಜೀವನಶೈಲಿಯ ಭಾಗವಾಗಬೇಕು ಎಂದು ಹೇಳಿದರು.</p>.<p>ಈ ಹ್ಯಾಕಥಾನ್ ಭಾರತ ಹಾಗೂ ಆಸ್ಟ್ರೇಲಿಯಾದ ವಿದ್ಯಾರ್ಥಿಗಳು, ಸ್ಟಾರ್ಟ್ಅಪ್, ಉದ್ಯಮಿಗಳಿಗೆ ನಾವೀನ್ಯ ಪರಿಹಾರಗಳನ್ನು ಒದಗಿಸಲಿದೆ. ಇದು ಸರ್ಕ್ಯುಲರ್ ಎಕಾನಮಿ ಸಿದ್ಧಾಂತವನ್ನು ಪಾಲಿಸುವುದರತ್ತ ನಮ್ಮ ಬದ್ಧತೆಯನ್ನು ತೋರಿಸುತ್ತದೆ ಎಂದು ತಿಳಿಸಿದರು.</p>.<p>ಸರ್ಕ್ಯುಲರ್ ಎಕಾನಮಿ ವ್ಯವಸ್ಥೆಯಲ್ಲಿ ಸಂಪನ್ಮೂಲಗಳನ್ನು ಬಳಕೆ ಮಾಡಿದ ಬಳಿಕ ಅದನ್ನು ವ್ಯರ್ಥ ಮಾಡುವ ಬದಲು ಮರು ಬಳಕೆ ಮಾಡಿ ಹೊಸ ಉತ್ಪನ್ನಗಳ ತಯಾರಿಯ ಮೂಲಕ ಪುನರ್ ಉಪಯೋಗಕ್ಕೆ ಬಳಸಲಾಗುತ್ತದೆ.</p>.<p>ಇಲ್ಲಿ ಯುವ ಶಕ್ತಿಯ ಹೊಸ ಆಲೋಚನೆಗಳು ಹಾಗೂ ಅವಿಷ್ಕಾರಗಳು ಅಪಾಯವನ್ನು ದೂರ ಮಾಡಲು ಸಹಕಾರಿಯಾಗಲಿದೆ ಎಂದು ಮೋದಿ ಹೇಳಿದರು.</p>.<p>ನಮ್ಮ ಯುವಕರ ಶಕ್ತಿ, ಸೃಜನಶೀಲತೆ ಮತ್ತು ಚಿಂತನೆಯ ಮೇಲೆ ನನಗೆ ಸಂಪೂರ್ಣ ನಂಬಿಕೆಯಿದೆ. ಅಲ್ಲದೆ ಇಡೀ ಜಗತ್ತಿಗೆ ಸುಸ್ಥಿರ, ಸಮಗ್ರ ಪರಿಹಾರಗಳನ್ನು ಕಂಡುಕೊಳ್ಳಬಲ್ಲರು. ಕೋವಿಡ್ ನಂತರದ ಜಗತ್ತನ್ನು ರೂಪಿಸುವಲ್ಲಿ ಭಾರತ-ಆಸ್ಟ್ರೇಲಿಯಾ ಪ್ರಬಲ ಸಹಭಾಗಿತ್ವವು ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಕೋವಿಡ್-19 ನಂತರದ ಜಗತ್ತು ರೂಪಿಸುವಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾದ ಪ್ರಬಲ ಸಹಭಾಗಿತ್ವವು ಪ್ರಮುಖ ಪಾತ್ರ ವಹಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.</p>.<p>ಹಾಗೆಯೇ ಸರ್ಕ್ಯುಲರ್ ಎಕಾನಮಿಯ (ಚಕ್ರೀಯ ಅರ್ಥವ್ಯವಸ್ಥೆ) ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಉಭಯ ದೇಶಗಳು ಮುಂದಾಗಲಿವೆ ಎಂದು ಭರವಸೆ ವ್ಯಕ್ತಪಡಿಸಿದರು.</p>.<p>ಭಾರತ-ಆಸ್ಟ್ರೇಲಿಯಾ ಸರ್ಕ್ಯುಲರ್ ಎಕಾನಮಿ ಹ್ಯಾಕಥಾನ್ ಕಾರ್ಖವೈಖರಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಬಳಕೆ ಆಧಾರಿತ ಅರ್ಥವ್ಯವಸ್ಥೆ ಮಾದರಿಗಳು ಜಗತ್ತಿನ ಮೇಲೆ ಹೆಚ್ಚಿನ ಒತ್ತಡವನ್ನು ಬೀರಿವೆ ಎಂದರು.</p>.<p>ಭೂತಾಯಿ ನೀಡುವ ಎಲ್ಲ ಸಂಪತ್ತಿಗೂ ನಾವು ಮಾಲೀಕರಲ್ಲ ಎಂಬುದನ್ನು ಎಂದಿಗೂ ಮರೆಯಬಾರದು. ನಾವು ಮುಂದಿನ ಪೀಳಿಗೆಯ ಪರಿಪಾಲಕರಾಗಿದ್ದೇವೆ ಎಂದು ತಿಳಿಸಿದರು.</p>.<p>ಉತ್ಪಾದನಾ ಪ್ರಕ್ರಿಯೆಗಳನ್ನು ಹೆಚ್ಚು ಪರಿಣಾಮಕಾರಿ ಹಾಗೂ ಕಡಿಮೆ ಮಾಲಿನ್ಯಕಾರಕವಾಗಿಸುವುದು ಮಾತ್ರ ಪರಿಹಾರವಲ್ಲ ಎಂಬುದನ್ನು ಪ್ರಧಾನಿ ಮೋದಿ ಒತ್ತಿ ಹೇಳಿದರು. ನಾವು ಎಷ್ಟೇ ವೇಗವಾಗಿ ಅಥವಾ ನಿಧಾನವಾಗಿ ಸಾಗಿದರೂ ಗುರಿ ತಪ್ಪಾಗಿದ್ದರೆ, ತಪ್ಪಾದ ಗಮ್ಯ ಸ್ಥಾನವನ್ನೇ ತಲುಪಲಿದ್ದೇವೆ. ಈ ನಿಟ್ಟಿನಲ್ಲಿ ಸರಿಯಾದ ದಿಶೆಯನ್ನು ಹೊಂದಿರಬೇಕು ಎಂದು ಹೇಳಿದರು.</p>.<p>ಇದನ್ನೂ ಓದಿ:<a href="https://www.prajavani.net/india-news/shah-promises-to-put-gangasagar-on-international-tourist-map-806519.html" itemprop="url">ಅಂತರರಾಷ್ಟ್ರೀಯ ಪ್ರವಾಸಿ ನಕ್ಷೆಗೆ ಗಂಗಾಸಾಗರ್ ಸೇರ್ಪಡೆ: ಅಮಿತ್ ಶಾ ಭರವಸೆ </a></p>.<p>ಅನೇಕ ಸವಾಲುಗಳಿಗೆ ಪರಿಹಾರ ಕಲ್ಪಿಸುವಲ್ಲಿ ಸರ್ಕ್ಯುಲರ್ ಎಕಾನಮಿ ಅನುಸರಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು. ವಸ್ತುಗಳ ಮರು ಬಳಕೆ, ತ್ಯಾಜ್ಯವನ್ನು ಹೋಗಲಾಡಿಸುವುದು, ಸಂಪನ್ಮೂಲ ದಕ್ಷತೆಯನ್ನು ಸುಧಾರಿಸುವುದು ನಮ್ಮ ಜೀವನಶೈಲಿಯ ಭಾಗವಾಗಬೇಕು ಎಂದು ಹೇಳಿದರು.</p>.<p>ಈ ಹ್ಯಾಕಥಾನ್ ಭಾರತ ಹಾಗೂ ಆಸ್ಟ್ರೇಲಿಯಾದ ವಿದ್ಯಾರ್ಥಿಗಳು, ಸ್ಟಾರ್ಟ್ಅಪ್, ಉದ್ಯಮಿಗಳಿಗೆ ನಾವೀನ್ಯ ಪರಿಹಾರಗಳನ್ನು ಒದಗಿಸಲಿದೆ. ಇದು ಸರ್ಕ್ಯುಲರ್ ಎಕಾನಮಿ ಸಿದ್ಧಾಂತವನ್ನು ಪಾಲಿಸುವುದರತ್ತ ನಮ್ಮ ಬದ್ಧತೆಯನ್ನು ತೋರಿಸುತ್ತದೆ ಎಂದು ತಿಳಿಸಿದರು.</p>.<p>ಸರ್ಕ್ಯುಲರ್ ಎಕಾನಮಿ ವ್ಯವಸ್ಥೆಯಲ್ಲಿ ಸಂಪನ್ಮೂಲಗಳನ್ನು ಬಳಕೆ ಮಾಡಿದ ಬಳಿಕ ಅದನ್ನು ವ್ಯರ್ಥ ಮಾಡುವ ಬದಲು ಮರು ಬಳಕೆ ಮಾಡಿ ಹೊಸ ಉತ್ಪನ್ನಗಳ ತಯಾರಿಯ ಮೂಲಕ ಪುನರ್ ಉಪಯೋಗಕ್ಕೆ ಬಳಸಲಾಗುತ್ತದೆ.</p>.<p>ಇಲ್ಲಿ ಯುವ ಶಕ್ತಿಯ ಹೊಸ ಆಲೋಚನೆಗಳು ಹಾಗೂ ಅವಿಷ್ಕಾರಗಳು ಅಪಾಯವನ್ನು ದೂರ ಮಾಡಲು ಸಹಕಾರಿಯಾಗಲಿದೆ ಎಂದು ಮೋದಿ ಹೇಳಿದರು.</p>.<p>ನಮ್ಮ ಯುವಕರ ಶಕ್ತಿ, ಸೃಜನಶೀಲತೆ ಮತ್ತು ಚಿಂತನೆಯ ಮೇಲೆ ನನಗೆ ಸಂಪೂರ್ಣ ನಂಬಿಕೆಯಿದೆ. ಅಲ್ಲದೆ ಇಡೀ ಜಗತ್ತಿಗೆ ಸುಸ್ಥಿರ, ಸಮಗ್ರ ಪರಿಹಾರಗಳನ್ನು ಕಂಡುಕೊಳ್ಳಬಲ್ಲರು. ಕೋವಿಡ್ ನಂತರದ ಜಗತ್ತನ್ನು ರೂಪಿಸುವಲ್ಲಿ ಭಾರತ-ಆಸ್ಟ್ರೇಲಿಯಾ ಪ್ರಬಲ ಸಹಭಾಗಿತ್ವವು ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>