‘ಭಾರತೀಯ ಸೇನೆಯ ಎಲ್ಲ ಯೋಧರಿಗೂ 1971ರ ಯುದ್ಧದ ಗೆಲುವಿನ ಶುಭಾಶಯಗಳು. ಆ ವಿಜಯದ 50ನೇ ವರ್ಷಾಚರಣೆಯ ಈ ಸಂದರ್ಭದಲ್ಲಿ ಹುತಾತ್ಮ ಯೋಧರನ್ನು ನಾನು ನೆನಪಿಸಿಕೊಳ್ಳುತ್ತಿದ್ದೇನೆ. ಅವರೆಲ್ಲರಿಗೂ ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇನೆ. ಈ ಗೆಲುವಿನ ವರ್ಷಾಚರಣೆ ಅಂಗವಾಗಿ ಡಿ.12ರಿಂದ 16ರ ವರೆಗೆ ಇಂಡಿಯಾ ಗೇಟ್ನಲ್ಲಿ ವಿಭಿನ್ನ ಕಾರ್ಯಕ್ರಮಗಳು ನಡೆಯಲಿವೆ. ಇದು ಸೌಭಾಗ್ಯದ ವಿಚಾರ. ನಮ್ಮ ವೀರ ಯೋಧರ ಬಲಿದಾನದ ನೆನಪಿಗಾಗಿ ಸ್ಥಾಪಿಸಲಾಗಿರುವ ಅಮರ್ ಜವಾನ್ ಜ್ಯೋತಿ ಬಳಿ ಕಾರ್ಯಕ್ರಮ ನಡೆಯಲಿದೆ. ಇದಕ್ಕೆ ದೇಶದ ಎಲ್ಲ ಜನರಿಗೂ ಆಹ್ವಾನ ನೀಡುತ್ತಿದ್ದೇನೆ. ನಮ್ಮ ಸೇನೆಯ ಬಗ್ಗೆ ನಮಗೆ ಹೆಮ್ಮೆಯಿದೆ. ಬನ್ನಿ, ವಿಜಯ ಪರ್ವವನ್ನು ಜತೆಗೂಡಿ ಸಂಭ್ರಮಿಸೋಣ’ ಎಂದು ರಾವತ್ ಹೇಳಿದ್ದರು.