ತಿರುಪತಿ: ತಿರುಮಲದಲ್ಲಿರುವ ವೆಂಕಟೇಶ್ವರ ದೇವಸ್ಥಾನ ಸಂಪರ್ಕಿಸಲು ಘಾಟ್ ಮೂಲಕ ಮೂರನೇ ರಸ್ತೆ ಹಾಗೂ ಮೂರನೇ ಮೆಟ್ಟಿಲು ಮಾರ್ಗವನ್ನು ಶೀಘ್ರವೇ ನಿರ್ಮಿಸಲಾಗುವುದು ಎಂದು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಆಡಳಿತ ಮಂಡಳಿ ಭಾನುವಾರ ತಿಳಿಸಿದೆ.
‘ನೂತನ ರಸ್ತೆ ಹಾಗೂ ಮೆಟ್ಟಿಲುಗಳ ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿ ಡಿಪಿಆರ್ ಸಿದ್ಧಪಡಿಸುವಂತೆ ಎಂಜಿನಿಯರಿಂಗ್ ವಿಭಾಗಕ್ಕೆ ಟಿಟಿಡಿ ಚೇರಮನ್ ವೈ.ವಿ.ಸುಬ್ಬಾರೆಡ್ಡಿ ಸೂಚಿಸಿದ್ದಾರೆ ಎಂದು ಮಂಡಳಿ ಪ್ರಕಟಣೆ ತಿಳಿಸಿದೆ.
‘ಉದ್ದೇಶಿತ ಮೆಟ್ಟಿಲುಗಳ ಮಾರ್ಗವನ್ನು ‘ಅನ್ನಮಂಯ್ಯ ಮಾರ್ಗ’ ಎಂದು ಕರೆಯಲಾಗುವುದು. ಕಡಪ ಜಿಲ್ಲೆ ಮತ್ತು ಹೈದರಾಬಾದ್ನಿಂದ ಬರುವವರಿಗೆ ಈ ಮಾರ್ಗದಿಂದ ಹೆಚ್ಚು ಅನುಕೂಲವಾಗುವುದು’ ಎಂದು ಪ್ರಕಟಣೆ ತಿಳಿಸಿದೆ.