ಈ ಸಂಬಂಧ ಟ್ವೀಟ್ ಮಾಡಿರುವ ಯಾದವ್,'ನೀತಿ ಆಯೋಗದ ಮೊದಲಬಹು ಆಯಾಮದ ಬಡತನ ಸೂಚ್ಯಂಕದಲ್ಲಿ ಅತ್ಯಂತ ಕಳಪೆ ಸ್ಥಾನದಲ್ಲಿರುವ ಮೂರು ರಾಜ್ಯಗಳ ಪೈಕಿ, ಬಿಜೆಪಿ ಆಡಳಿತವಿರುವಉತ್ತರ ಪ್ರದೇಶವೂ ಒಂದಾಗಿದೆ. ಅತಿಹೆಚ್ಚು ಅಪೌಷ್ಠಿಕತೆ ಇರುವ ರಾಜ್ಯಗಳ ಪಟ್ಟಿಯಲ್ಲಿಯೂ ಉತ್ತರ ಪ್ರದೇಶ ಮೂರನೇ ಸ್ಥಾನದಲ್ಲಿದೆ. ಮಕ್ಕಳು ಮತ್ತು ಯುವಕರ ಮರಣ ದರದಲ್ಲಿ ಅತ್ಯಂತ ಕೆಳ ಸ್ಥಾನದಲ್ಲಿದೆ. ಇವು ಬಿಜೆಪಿ ಸರ್ಕಾರದ ವೈಫಲ್ಯದ ಸಂಕೇತಗಳು' ಎಂದು ದೂರಿದ್ದಾರೆ.