ಭಾನುವಾರ ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಸಾವರ್ಕರ್ 1925ರಲ್ಲಿಯೇ ದೇಶ ವಿಭಜನೆಯ ಬೀಜ ಬಿತ್ತಿದ್ದರು. ಎರಡು ರಾಷ್ಟ್ರದ ಪರಿಕಲ್ಪನೆಯನ್ನು ಹುಟ್ಟುಹಾಕಿದ್ದೇ ಸಾವರ್ಕರ್. ಇದನ್ನು 1937ರಲ್ಲಿ ಮಹಮ್ಮದ್ ಆಲಿ ಜಿನ್ಹಾ ಬೆಂಬಲಿಸಿದರು. ಅವರು (ಬಿಜೆಪಿ) ವಿಭಜಕರು. ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾರತೀಯ ಜನತಾ ಪಕ್ಷದ ಪಾತ್ರ ಏನು’ ಎಂದು ಪ್ರಶ್ನಿಸಿದರು.