‘2002ರಲ್ಲಿ ಗುಜರಾತ್ನಲ್ಲಿ ನಡೆದಿದ್ದ ಹಿಂಸಾಚಾರದ ಕುರಿತು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗಿತ್ತು. ಈ ದೇಶದ ಸರ್ವೋಚ್ಛ ನ್ಯಾಯಾಲಯವು ಎರಡು ದಶಕಗಳ ಬಳಿಕ ಈ ಕುರಿತ ತೀರ್ಪು ಪ್ರಕಟಿಸಿತ್ತು. ಹಿಂಸಾಚಾರದಲ್ಲಿ ಗುಜರಾತ್ನ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಪಾತ್ರದ ಕುರಿತು ಬಿಬಿಸಿಯು ತನ್ನ ಸಾಕ್ಷ್ಯಚಿತ್ರದಲ್ಲಿ ಉಲ್ಲೇಖಿಸಿದೆ. ಇದನ್ನು ಕೆಲವರು ಅಭಿವ್ಯಕ್ತಿ ಸ್ವಾತಂತ್ರ್ಯವೆಂದು ಕರೆದಿದ್ದಾರೆ. ಅಭಿವ್ಯಕ್ತಿಯ ಹೆಸರಿನಲ್ಲಿ ಸುಪ್ರೀಂ ಕೋರ್ಟ್ನ ವಿಶ್ವಾಸಾರ್ಹತೆ ಪ್ರಶ್ನಿಸಬಹುದೆ? ಎರಡು ದಶಕಗಳ ಕಾಲ ನಡೆದ ತನಿಖೆಯನ್ನು ಕಡೆಗಣಿಸಬಹುದೇ? ಇದು ಮತ್ತೊಂದು ಬಗೆಯ ರಾಜಕಾರಣ ಎಂಬುದು ಸ್ಪಷ್ಟ’ ಎಂದು ತಿಳಿಸಿದ್ದಾರೆ.