‘ರೈತರು ರಸ್ತೆಗಳನ್ನು ತಡೆಗಟ್ಟಿದ್ದಾರೆ ಎಂದು ರೈತರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಲಾಗುತ್ತಿದೆ. ಈ ಆರೋಪವನ್ನು ನಾವು ಮೊದಲ ದಿನದಿಂದಲೇ ತಿರಸ್ಕರಿಸಿದ್ದೇವೆ. ಸಿಂಘು ಗಡಿಯಲ್ಲಿ, ಮೇಲ್ಸೇತುವೆ ನಿರ್ಮಾಣದ ಕಾರಣ ಈಗಾಗಲೇ ಸಂಚಾರಕ್ಕೆ ಮುಚ್ಚಿರುವ ರಸ್ತೆಯ ಭಾಗದಲ್ಲಿ ರೈತರು ಬೀಡುಬಿಟ್ಟಿದ್ದಾರೆ. ವಾಹನ ಸಂಚಾರಕ್ಕೆ ನಮ್ಮ ಕಡೆಯಿಂದ ಯಾವುದಾದರೂ ಅಡತಡೆ ಇದ್ದರೆ ಅದನ್ನು ತೆರವುಗೊಳಿಸುತ್ತೇವೆ’ ಎಂದುಹಿರಿಯ ರೈತ ನಾಯಕ ಎಸ್ಕೆಎಂ ಸದಸ್ಯ ದರ್ಶನ್ ಪಾಲ್ ಹೇಳಿದರು.