ಈ ಬಗ್ಗೆ ರಾಂಚಿ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ನೌಶದ್ ಅಲಾಂ ಪ್ರತಿಕ್ರಿಯಿಸಿದ್ದು, ‘ಸೀಮಾ ಅವರು ಮನೆಯಲ್ಲಿ ಪಾತ್ರೆ ತೊಳಿಯುತ್ತಿದ್ದ ವೇಳೆ ಬಸೋ ದೇವಿ ಬಂದು ಕಬ್ಬಿಣದ ಸರಳಿನಿಂದ ಹೊಡೆದಿದ್ದಾರೆ. ಸೀಮಾ ಮಾಟಮಂತ್ರ ಅಭ್ಯಾಸ ಮಾಡಿದ್ದು, ಇದರಿಂದ ಗ್ರಾಮದಲ್ಲಿ ಕೆಲವರು ಮೃತಪಟ್ಟಿದ್ದಾರೆ ಎಂದು ಬಸು ಆರೋಪಿಸಿದ್ದಾರೆ. ಆದಾಗ್ಯೂ ಆಸ್ತಿ ವಿವಾದ ಸಂಬಂಧ ಕೊಲೆ ನಡೆದಿರುವ ಶಂಕೆ ಇದೆ’ ಎಂದು ತಿಳಿಸಿದ್ದಾರೆ.