ಈ ನಡುವೆ ಒಡಿಶಾ ಸರ್ಕಾರ ಸೋಮವಾರ ಲಾಕ್ಡೌನ್ ಸಡಿಲಗೊಳಿಸಿದ್ದು, ಮೇ 24 ಮತ್ತು 25 ರಂದು 10 ಕರಾವಳಿ ಜಿಲ್ಲೆಗಳಲ್ಲಿ ಮಳಿಗೆಗಳನ್ನು ತೆರೆಯಲು ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 1ರ ವರೆಗೆ ಅನುಮತಿ ನೀಡಿದೆ. ಚಂಡಮಾರುತ ತನ್ನ ಪ್ರಭಾವ ಬೀರುವ ಮುನ್ನ ಸಾರ್ವಜನಿಕರು ಅಗತ್ಯ ವಸ್ತುಗಳನ್ನು ಕೊಳ್ಳಬಹುದು. ಅಪಾಯದ ಸ್ಥಳಗಳಿಂದ ಜನರನ್ನು ಸುರಕ್ಷಿತವಾಗಿ ಕರೆತರಲು ಒಡಿಶಾ ಸರ್ಕಾರ ರಕ್ಷಣಾ ತಂಡವನ್ನು ನೇಮಿಸಿದೆ.