ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಕರ ಸವಾಲಿಗೆ ಪ್ರಾಣತೆತ್ತ ವೃದ್ಧ!

Last Updated 15 ಆಗಸ್ಟ್ 2020, 14:40 IST
ಅಕ್ಷರ ಗಾತ್ರ

ಲಖನೌ: ಗ್ರಾಮದ ಯುವಕರ ₹200 ರೂಪಾಯಿ ಸವಾಲನ್ನು ಸ್ವೀಕರಿಸಿ, ಕೊಳ ದಾಟಲು ಪ್ರಯತ್ನಿಸಿದ 60 ವರ್ಷದ ವೃದ್ಧ ಮಾರ್ಗ ಮಧ್ಯೆಯೇ ಮೃತಪಟ್ಟಿರುವ ಘಟನೆಉತ್ತರ ಪ್ರದೇಶದ ಬಡಾಯುಜಿಲ್ಲೆಯಲ್ಲಿ ನಡೆದಿದೆ.

ಕುಲ್ಬೀರ್ ಸಿಂಗ್ ಮೃತಪಟ್ಟವರು.ಯುವಕರ ಸವಾಲಿನಂತೆ ಕೊಳಕ್ಕೆ ಹಾರಿದ ಕುಲ್ಬೀರ್‌ ಸಿಂಗ್‌ ಈಜಲು ಪ್ರಾರಂಭಿಸಿದರು. ಭಾರಿ ಮಳೆಯಿಂದಾಗಿ ನೀರಿನ ಮಟ್ಟವೂ ಹೆಚ್ಚಿದ್ದರಿಂದ ಅವರಿಗೆ ಕೊಳ ದಾಟಲು ಸಾಧ್ಯವಾಗಿಲ್ಲ. ಕುಲ್ಬೀರ್‌ ಅವರು ಮುಳುಗುತ್ತಿದುದ್ದನ್ನು ಕಂಡ ಯುವಕರು ಕೊಳಕ್ಕೆ ಹಾರಿ ಅವರನ್ನು ದಡ ಸೇರಿಸಿದ್ದಾರೆ. ತಕ್ಷಣವೇ ಅವರನ್ನು ಸ್ಥಳೀಯ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ, ಅಷ್ಟರಾಗಲೇ ಅವರು ಮೃಪಟ್ಟಿದ್ದರು.

ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT