ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಳ್ಳಿಗಳಲ್ಲಿ ಸೋಂಕು ಹೆಚ್ಚುತ್ತಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ. ಮಾತ್ರೆಯೂ ಸಿಗುತ್ತಿಲ್ಲ. ಅದಕ್ಕೂ ಬೆಂಗಳೂರಿಗೆ ಹೋಗಬೇಕಿದೆ. ಒಬ್ಬರೇ ಅಧಿಕಾರವನ್ನು ಹಿಡಿದುಕೊಂಡಿರುವುದರಿಂದ ಈ ಸಮಸ್ಯೆ ಸೃಷ್ಟಿಯಾಗಿದೆ. ಪರ್ಸೆಂಟೇಜ್ಗಾಗಿ ಎಲ್ಲಾ ಅಧಿಕಾರ ಒಂದು ಕಡೆ ಕೇಂದ್ರೀಕೃತವಾಗಿದೆ. ಸರ್ಕಾರ ನಡೆಸುವ ಮಂದಿ ಹೆಣದ ಮೇಲೆ ದುಡ್ಡು ಎತ್ತಲು ಹೋಗಬಾರದು. ಇದು ಒಳ್ಳೆಯದಲ್ಲ’ ಎಂದು ಹರಿಹಾಯ್ದರು.