‘ಭೋವಿ ಸಮಾಜದ ಕುಲಕಸುಬಿನಿಂದಲೇ ಸಮಾಜ, ದೇಶ ಕಟ್ಟಲು ಸಾಧ್ಯವಾಗಿದೆ. ಕಲ್ಲು ಒಡೆಯದೆ ಮಂದಿರ ನಿರ್ಮಿಸಲು, ದೇವರ ಮೂರ್ತಿ ಕೆತ್ತಲು, ರಸ್ತೆ ನಿರ್ಮಿಸಲು, ಅಣೆಕಟ್ಟು ಕಟ್ಟಲು ಸಾಧ್ಯವಿಲ್ಲ. ಕಲ್ಲು ಒಡೆಯುವವರಿಗೆ ಅಧಿಕಾರಿಗಳು ಕಿರುಕುಳ ಕೊಡುತ್ತಿರುವುದು ನನ್ನ ಗಮನಕ್ಕೂ ಬಂದಿದೆ. ನನ್ನ ಅಧಿಕಾರದ ಅವಧಿಯಲ್ಲೇ ಸಮಸ್ಯೆಗಳನ್ನು ಬಗೆಹರಿಸುತ್ತೇನೆ’ ಎಂದು ಅವರು ಅಭಯ ನೀಡಿದರು.