ಕೋಲ್ಕತ್ತದಲ್ಲಿ ಆರೋಗ್ಯ ವಾಹಿನಿ ಟ್ರಸ್ಟ್ನ ಶ್ರೀ ಸತ್ಯಸಾಯಿ ಆರೋಗ್ಯ ವಾಹಿನಿ ಸಂಚಾರಿ ಕ್ಲಿನಿಕ್ಗಳ ಮೂಲಕ ಗ್ರಾಮೀಣ ಭಾಗದ ಜನರಿಗೆ ಅವರು ಇದ್ದಲ್ಲಿಯೇ ವೈದ್ಯಕೀಯ ಸೌಲಭ್ಯವನ್ನು ಒದಗಿಸುತ್ತಿದೆ. ಇದೇ ಮಾದರಿಯನ್ನು ಅನುಸರಿಸಲು ಇಲಾಖೆ ಮುಂದಾಗಿದೆ. ‘ಮುಖ್ಯಮಂತ್ರಿ ಆರೋಗ್ಯ ವಾಹಿನಿ’ ಯೋಜನೆಯಡಿ ಬೀದರ್, ಚಾಮರಾಜನಗರ, ಹಾವೇರಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿಪ್ರಾಯೋಗಿಕವಾಗಿ ಸಂಚಾರಿ ಕ್ಲಿನಿಕ್ಗಳು ಕಾರ್ಯನಿರ್ವಹಿಸಲಿವೆ. ಇದಕ್ಕಾಗಿ ₹ 11 ಕೋಟಿ ಮೀಸಲಿಡಲಾಗಿದೆ.