ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಾಲಭವನಗಳಲ್ಲಿ ಸದ್ಯ ಕಾರ್ಯಕ್ರಮ ಸಹಾಯಕರು, ಸಂಯೋಜಕರಾಗಿ ತಲಾ ಇಬ್ಬರು ಸಿಬ್ಬಂದಿ ಇದ್ದು, ತಾತ್ಕಾಲಿಕ ಕೆಲಸ ಹಾಗೂ ಕಡಿಮೆ ವೇತನದಿಂದಾಗಿ ಬಹುತೇಕ ಸಿಬ್ಬಂದಿ ಕೆಲಸ ತೊರೆಯುತ್ತಿದ್ದಾರೆ. ಇದರಿಂದ ಸ್ಥಳೀಯ ಮಕ್ಕಳಿಗೆ ಗುಣಮಟ್ಟದ ಚಟುವಟಿಕೆಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ’ ಎಂದರು.