ಪೇಶ್ವೆ ಬ್ರಾಹ್ಮಣರಾದ ವಾಸುದೇವ ಬಲವಂತ ಫಡಕೆ, ಬಾಲಗಂಗಾಧರ ತಿಲಕ, ವೀರ ಸಾವರ್ಕರ್, ಚಾಪೇಕರ್ ಸಹೋದರರು, ಸೇನಾಪತಿ ಬಾಪಟ್, ಗೋಪಾಲಕೃಷ್ಣ ಗೋಖಲೆ, ವಿನೋಭಾ ಭಾವೆ ಮೊದಲಾದವರು ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಹಲವರು ಪ್ರಾಣ ತ್ಯಾಗವನ್ನೂ ಮಾಡಿದ್ದಾರೆ. ಮಹಾದೇವ ಗೋವಿಂದ ರಾನಡೆ ಅವರ ವ್ಯಕ್ತಿತ್ವದಿಂದ ಪ್ರಭಾವಿತನಾಗಿದ್ದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ದಾದಾ ಸಾಹೇಬ್ ಫಾಲ್ಕೆ, ದ.ರಾ.ಬೇಂದ್ರೆ, ವಿ.ಎನ್.ಗಾಡ್ಗೀಳ್ ಕೂಡಾ ಇದೇ ಸಮುದಾಯದವರು. ಸಮಾಜಕ್ಕೆ ಇವರ ಕೊಡುಗೆ ಏನು ಎಂಬುದು ಗೊತ್ತೆ ಎಂದು ಅವರು ಪ್ರಶ್ನಿಸಿದ್ದಾರೆ.