‘ಕೆ.ಸಿ. ವ್ಯಾಲಿ ಯೋಜನೆಗೆ ಈ ಬಜೆಟ್ನಲ್ಲೂ ₹ 500 ಕೋಟಿ ಒದಗಿಸಿರುವುದು ಸ್ವಾಗತಾರ್ಹ. ಮೊದಲ ಹಂತದಲ್ಲಿ ನಿತ್ಯ 400 ದಶಲಕ್ಷ ಲೀಟರ್ ನೀರನ್ನು ಹರಿಸಿ, ಕೋಲಾರ ಜಿಲ್ಲೆಯ 126 ಕೆರೆಗಳನ್ನು ಭರ್ತಿ ಮಾಡಲು ಯೋಜನೆ ರೂಪಿಸಲಾಗಿತ್ತು. ಆದರೆ, 83 ಕೆರೆಗಳಿಗೆ ಮಾತ್ರ ನೀರು ಹರಿದಿದೆ. ಇನ್ನೂ 43 ಕೆರೆಗಳಿಗೆ ನೀರು ಬರಬೇಕಿದೆ. ಜಲಮಂಡಳಿ ಸರಿಯಾಗಿ ಸಹಕಾರ ನೀಡದಿರುವುದೇ ಕಾರಣ’ ಎಂದು ನಾರಾಯಣಸ್ವಾಮಿ ದೂರಿದರು.