<p><strong>ಬೆಂಗಳೂರು:</strong> ಪರೀಕ್ಷೆ ಇಲ್ಲದೆ ಪ್ರಥಮ ಪಿಯುಸಿ ವಿದ್ಯಾರ್ಥಿಗಳೆಲ್ಲ ಪಾಸ್ ಎಂದು ಘೋಷಿಸಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆ, ತಲಾ 100 ಅಂಕಗಳ ಎರಡು ‘ಅಸೈನ್ಮೆಂಟ್’ಗಳ ಮೂಲಕ ಪರೀಕ್ಷೆ ನಡೆಸುತ್ತಿರುವುದು ವಿದ್ಯಾರ್ಥಿಗಳು, ಪೋಷಕರು ಮತ್ತು ಉಪನ್ಯಾಸಕರನ್ನು ಗೊಂದಲಕ್ಕೀಡು ಮಾಡಿದೆ.</p>.<p>ವಿದ್ಯಾರ್ಥಿಗಳ ಕಲಿಕಾ ಪ್ರಕ್ರಿಯೆಯ ನಿರಂತರತೆಯ ಉದ್ದೇಶಕ್ಕಾಗಿ ಅಸೈನ್ಮೆಂಟ್ಗಳನ್ನು ಬರೆಸಿ ಮೌಲ್ಯಾಂಕನ ನೀಡಿ, ವಿದ್ಯಾರ್ಥಿ ಸಾಧನೆಯ ಟ್ರ್ಯಾಕಿಂಗ್ ವ್ಯವಸ್ಥೆಯಲ್ಲಿ (ಎಸ್ಎಟಿಎಸ್) ನಮೂದಿಸುವಂತೆ ಇದೇ 8ರಂದು ಇಲಾಖೆ ಸುತ್ತೋಲೆ ಹೊರಡಿಸಿದೆ.</p>.<p>ಸುತ್ತೋಲೆ ಪ್ರಕಾರ ಎರಡು ಮಾದರಿ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಉತ್ತರಿಸಬೇಕು. ಅವುಗಳನ್ನು ಅಸೈನ್ಮೆಂಟ್ ಎಂದು ಪರಿಗಣಿಸಿ, ಉಪನ್ಯಾಸಕರು ಮೌಲ್ಯಮಾಪನ ಮಾಡಿ ಅಂಕ ನೀಡಬೇಕು. ಒಟ್ಟು 200 ಅಂಕಗಳಿಗೆ ಪಡೆದ ಅಂಕಗಳನ್ನು ಸ್ಲ್ಯಾಬ್ ಆಧರಿಸಿ 60 ಅಂಕಗಳಿಗೆ ಪರಿವರ್ತಿಸಿಕೊಳ್ಳಬೇಕು. ಈ ಅಂಕಗಳಿಗೆ ಉತ್ತೀರ್ಣ ಅಂಕ 35 ಮತ್ತು ಉಪನ್ಯಾಸಕರ ಆಂತರಿಕ ಮೌಲ್ಯಮಾಪನ ಅಂಕ 5 ನೀಡಬೇಕು. ಹೀಗೆ 100 ಅಂಕಗಳಿಗೆ ಎಷ್ಟು ಅಂಕಗಳನ್ನು ವಿದ್ಯಾರ್ಥಿಗಳು ಪಡೆದಿದ್ದಾರೆ ಎಂಬುದನ್ನು ಲೆಕ್ಕ ಮಾಡಿ ಎಸ್ಎಟಿಎಸ್ನಲ್ಲಿ ನಮೂದಿಸಬೇಕು. ಸುತ್ತೋಲೆಯಲ್ಲಿ 2 ಮಾದರಿ ಪ್ರಶ್ನೆಪತ್ರಿಕೆಗಳು ಎಂದು ಹೇಳಲಾಗಿದೆ. ಆದರೆ, ವಾಸ್ತವವಾಗಿ ಪ್ರತಿ ವಿಷಯಕ್ಕೆ 2 ಮಾದರಿ ಪ್ರಶ್ನೆ ಪತ್ರಿಕೆಗಳಿಗೆ ವಿದ್ಯಾರ್ಥಿಗಳು ಉತ್ತರಿಸಬೇಕಿದೆ. ಅಂದರೆ, 6 ವಿಷಯಗಳಿಂದ ಒಟ್ಟು 12 ಪ್ರಶ್ನೆಪತ್ರಿಕೆಗಳಿಗೆ ವಿದ್ಯಾರ್ಥಿಗಳು ಉತ್ತರಿಸಬೇಕು.</p>.<p>ಮೊದಲ ಪ್ರಶ್ನೆ ಪತ್ರಿಕೆಯ ಅಸೈನ್ಮೆಂಟ್ಗಳನ್ನು ಇದೇ 20ರೊಳಗೆ ಸಲ್ಲಿಸಬೇಕು. ಬೆಂಗಳೂರಿನ ಕೆಲವು ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ಸಂಪರ್ಕಿಸಲು ಉಪನ್ಯಾಸಕರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.</p>.<p>‘ಅತಿಥಿ ಉಪನ್ಯಾಸಕರನ್ನು ಈಗಾಗಲೇ ಇಲಾಖೆ ಬಿಡುಗಡೆ ಮಾಡಿದೆ. ಅವರಿಗೆ ಕೆಲವು ತಿಂಗಳ ವೇತನ ಬಾಕಿ ಬೇರೆ ಇದೆ. ಅತಿಥಿ ಉಪನ್ಯಾಸಕರನ್ನು ಏಕಾಏಕಿ ಬಿಡುಗಡೆಗೊಳಿಸಿರುವುದರಿಂದ ಅವರೆಲ್ಲರೂ ಅಸೈನ್ಮೆಂಟ್ ಮೌಲ್ಯಮಾಪನ ಮಾಡದಿರಲು ನಿರ್ಧರಿಸಿದ್ದಾರೆ. ಇದು ಪ್ರಾಂಶುಪಾಲರಿಗೆ ತಲೆನೋವು ತಂದಿದೆ.</p>.<p>‘ವಿದ್ಯಾರ್ಥಿ ವೇತನ ಪಡೆಯಲು ಕೆಲವು ಪ್ರವರ್ಗದ ವಿದ್ಯಾರ್ಥಿಗಳಿಗೆ ಇರಬೇಕಾದ ಕನಿಷ್ಠ ಶೇಕಡ ಅಂಕಗಳನ್ನು ಗೊತ್ತುಪಡಿಸಲಾಗಿದೆ. ವಿದ್ಯಾರ್ಥಿಗಳು ಅಸೈನ್ಮೆಂಟ್ ಸಲ್ಲಿಸದಿದ್ದರೆ, ಕನಿಷ್ಠ ಅಂಕ ಮಾತ್ರ ಸಿಗಲಿದೆ. ಅಂಥವರು ಶಿಷ್ಯವೇತನದಿಂದ ವಂಚಿತರಾಗುವ ಸಾಧ್ಯತೆಗಳಿವೆ. ಆದ್ದರಿಂದ ಈ ಮೌಲ್ಯಾಂಕನ ವಿಧಾನವೇ ವಿರೋಧಭಾಸದಿಂದ ಕೂಡಿದೆ’ ಎಂದೂ ಪ್ರಾಂಶುಪಾಲರೊಬ್ಬರು ಅಭಿಪ್ರಾಯಪಟ್ಟರು.</p>.<p>ಮೌಲ್ಯಾಂಕನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮತ್ತು ದ್ವಿತೀಯ ಪಿಯುಸಿ ತರಗತಿ ಆರಂಭವಾಗುವ ಸಂದರ್ಭದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ನೇರ ಪರೀಕ್ಷೆ ನಡೆಸಲು ಅವಕಾಶ ಕಲ್ಪಿಸುವಂತೆ ಪದವಿ ಪೂರ್ವ ಉಪನ್ಯಾಸಕರ ಸಂಘ ಈಗಾಗಲೇ ಮನವಿ ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಪರೀಕ್ಷೆ ಇಲ್ಲದೆ ಪ್ರಥಮ ಪಿಯುಸಿ ವಿದ್ಯಾರ್ಥಿಗಳೆಲ್ಲ ಪಾಸ್ ಎಂದು ಘೋಷಿಸಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆ, ತಲಾ 100 ಅಂಕಗಳ ಎರಡು ‘ಅಸೈನ್ಮೆಂಟ್’ಗಳ ಮೂಲಕ ಪರೀಕ್ಷೆ ನಡೆಸುತ್ತಿರುವುದು ವಿದ್ಯಾರ್ಥಿಗಳು, ಪೋಷಕರು ಮತ್ತು ಉಪನ್ಯಾಸಕರನ್ನು ಗೊಂದಲಕ್ಕೀಡು ಮಾಡಿದೆ.</p>.<p>ವಿದ್ಯಾರ್ಥಿಗಳ ಕಲಿಕಾ ಪ್ರಕ್ರಿಯೆಯ ನಿರಂತರತೆಯ ಉದ್ದೇಶಕ್ಕಾಗಿ ಅಸೈನ್ಮೆಂಟ್ಗಳನ್ನು ಬರೆಸಿ ಮೌಲ್ಯಾಂಕನ ನೀಡಿ, ವಿದ್ಯಾರ್ಥಿ ಸಾಧನೆಯ ಟ್ರ್ಯಾಕಿಂಗ್ ವ್ಯವಸ್ಥೆಯಲ್ಲಿ (ಎಸ್ಎಟಿಎಸ್) ನಮೂದಿಸುವಂತೆ ಇದೇ 8ರಂದು ಇಲಾಖೆ ಸುತ್ತೋಲೆ ಹೊರಡಿಸಿದೆ.</p>.<p>ಸುತ್ತೋಲೆ ಪ್ರಕಾರ ಎರಡು ಮಾದರಿ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಉತ್ತರಿಸಬೇಕು. ಅವುಗಳನ್ನು ಅಸೈನ್ಮೆಂಟ್ ಎಂದು ಪರಿಗಣಿಸಿ, ಉಪನ್ಯಾಸಕರು ಮೌಲ್ಯಮಾಪನ ಮಾಡಿ ಅಂಕ ನೀಡಬೇಕು. ಒಟ್ಟು 200 ಅಂಕಗಳಿಗೆ ಪಡೆದ ಅಂಕಗಳನ್ನು ಸ್ಲ್ಯಾಬ್ ಆಧರಿಸಿ 60 ಅಂಕಗಳಿಗೆ ಪರಿವರ್ತಿಸಿಕೊಳ್ಳಬೇಕು. ಈ ಅಂಕಗಳಿಗೆ ಉತ್ತೀರ್ಣ ಅಂಕ 35 ಮತ್ತು ಉಪನ್ಯಾಸಕರ ಆಂತರಿಕ ಮೌಲ್ಯಮಾಪನ ಅಂಕ 5 ನೀಡಬೇಕು. ಹೀಗೆ 100 ಅಂಕಗಳಿಗೆ ಎಷ್ಟು ಅಂಕಗಳನ್ನು ವಿದ್ಯಾರ್ಥಿಗಳು ಪಡೆದಿದ್ದಾರೆ ಎಂಬುದನ್ನು ಲೆಕ್ಕ ಮಾಡಿ ಎಸ್ಎಟಿಎಸ್ನಲ್ಲಿ ನಮೂದಿಸಬೇಕು. ಸುತ್ತೋಲೆಯಲ್ಲಿ 2 ಮಾದರಿ ಪ್ರಶ್ನೆಪತ್ರಿಕೆಗಳು ಎಂದು ಹೇಳಲಾಗಿದೆ. ಆದರೆ, ವಾಸ್ತವವಾಗಿ ಪ್ರತಿ ವಿಷಯಕ್ಕೆ 2 ಮಾದರಿ ಪ್ರಶ್ನೆ ಪತ್ರಿಕೆಗಳಿಗೆ ವಿದ್ಯಾರ್ಥಿಗಳು ಉತ್ತರಿಸಬೇಕಿದೆ. ಅಂದರೆ, 6 ವಿಷಯಗಳಿಂದ ಒಟ್ಟು 12 ಪ್ರಶ್ನೆಪತ್ರಿಕೆಗಳಿಗೆ ವಿದ್ಯಾರ್ಥಿಗಳು ಉತ್ತರಿಸಬೇಕು.</p>.<p>ಮೊದಲ ಪ್ರಶ್ನೆ ಪತ್ರಿಕೆಯ ಅಸೈನ್ಮೆಂಟ್ಗಳನ್ನು ಇದೇ 20ರೊಳಗೆ ಸಲ್ಲಿಸಬೇಕು. ಬೆಂಗಳೂರಿನ ಕೆಲವು ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ಸಂಪರ್ಕಿಸಲು ಉಪನ್ಯಾಸಕರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.</p>.<p>‘ಅತಿಥಿ ಉಪನ್ಯಾಸಕರನ್ನು ಈಗಾಗಲೇ ಇಲಾಖೆ ಬಿಡುಗಡೆ ಮಾಡಿದೆ. ಅವರಿಗೆ ಕೆಲವು ತಿಂಗಳ ವೇತನ ಬಾಕಿ ಬೇರೆ ಇದೆ. ಅತಿಥಿ ಉಪನ್ಯಾಸಕರನ್ನು ಏಕಾಏಕಿ ಬಿಡುಗಡೆಗೊಳಿಸಿರುವುದರಿಂದ ಅವರೆಲ್ಲರೂ ಅಸೈನ್ಮೆಂಟ್ ಮೌಲ್ಯಮಾಪನ ಮಾಡದಿರಲು ನಿರ್ಧರಿಸಿದ್ದಾರೆ. ಇದು ಪ್ರಾಂಶುಪಾಲರಿಗೆ ತಲೆನೋವು ತಂದಿದೆ.</p>.<p>‘ವಿದ್ಯಾರ್ಥಿ ವೇತನ ಪಡೆಯಲು ಕೆಲವು ಪ್ರವರ್ಗದ ವಿದ್ಯಾರ್ಥಿಗಳಿಗೆ ಇರಬೇಕಾದ ಕನಿಷ್ಠ ಶೇಕಡ ಅಂಕಗಳನ್ನು ಗೊತ್ತುಪಡಿಸಲಾಗಿದೆ. ವಿದ್ಯಾರ್ಥಿಗಳು ಅಸೈನ್ಮೆಂಟ್ ಸಲ್ಲಿಸದಿದ್ದರೆ, ಕನಿಷ್ಠ ಅಂಕ ಮಾತ್ರ ಸಿಗಲಿದೆ. ಅಂಥವರು ಶಿಷ್ಯವೇತನದಿಂದ ವಂಚಿತರಾಗುವ ಸಾಧ್ಯತೆಗಳಿವೆ. ಆದ್ದರಿಂದ ಈ ಮೌಲ್ಯಾಂಕನ ವಿಧಾನವೇ ವಿರೋಧಭಾಸದಿಂದ ಕೂಡಿದೆ’ ಎಂದೂ ಪ್ರಾಂಶುಪಾಲರೊಬ್ಬರು ಅಭಿಪ್ರಾಯಪಟ್ಟರು.</p>.<p>ಮೌಲ್ಯಾಂಕನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮತ್ತು ದ್ವಿತೀಯ ಪಿಯುಸಿ ತರಗತಿ ಆರಂಭವಾಗುವ ಸಂದರ್ಭದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ನೇರ ಪರೀಕ್ಷೆ ನಡೆಸಲು ಅವಕಾಶ ಕಲ್ಪಿಸುವಂತೆ ಪದವಿ ಪೂರ್ವ ಉಪನ್ಯಾಸಕರ ಸಂಘ ಈಗಾಗಲೇ ಮನವಿ ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>