‘ಕರ್ನಾಟಕ ವಿಧಾನಪರಿಷತ್ನ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮ 165ರ ಅಡಿ ಕೆ. ಪ್ರತಾಪಚಂದ್ರಶೆಟ್ಟಿ ಅವರನ್ನು ಸಭಾಪತಿ ಸ್ಥಾನದಿಂದ ತೆಗೆದು ಹಾಕಬೇಕು’ ಎಂಬ ನಿರ್ಣಯವನ್ನು ಆಯನೂರು ಮಂಡಿಸಿದರು. ಇದಕ್ಕೆ ಡಾ. ತಳವಾರ ಸಾಬಣ್ಣ, ಅರುಣ್ ಶಹಾಪುರ, ಎಸ್.ವಿ. ಸಂಕನೂರ, ಮಹಾಂತೇಶ್ ಕವಟಗಿಮಠ ಬೆಂಬಲ ವ್ಯಕ್ತಪಡಿಸಿದರು.