ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಎಚ್.ಡಿ.ಕುಮಾರಸ್ವಾಮಿ,‘ನಾಲ್ಕೈದು ವರ್ಷದಿಂದ ಅತಿಥಿಗೃಹಕ್ಕೆ ಹೋಗಿಲ್ಲ. ಸಿನಿಮಾ ಕ್ಷೇತ್ರದ ಕೆಲವರು ಅಲ್ಲಿದ್ದರು. ಅವರ ಸಾಮಗ್ರಿಗಳು ಅಲ್ಲಿದ್ದು, ಅವರು ಊರಿಗೆ ಹೋಗಿದ್ದಾಗ ಆರೋಪ ಮಾಡುತ್ತಿರುವ ಕಡೆಯವರು ಬೀಗ ಹಾಕಿದ್ದಾರೆ. ಸಾಮಗ್ರಿ ತೆರವು ಮಾಡಲು ಭೋಜೇಗೌಡರಿಗೆ ಹೇಳಿದ್ದೆ. ಸಾಮಗ್ರಿ ತರಲು ಸಿನಿಮಾದವರು ಹೋಗಿರಬೇಕು. ಗಲಾಟೆ ಮಾಡುವ ಉದ್ದೇಶ ನನಗಿಲ್ಲ. ಅವರ ಮಟ್ಟಕ್ಕೆ ನಾನು ಇಳಿಯುವುದಿಲ್ಲ’ ಎಂದರು.