ಕನ್ನಡದಲ್ಲಿ ದಲಿತ ಸಾಹಿತ್ಯವೆಂಬುದು ಇತ್ತೀಚಿನ ವರ್ಷಗಳಲ್ಲಿ ಹುಟ್ಟಿದ್ದಲ್ಲ; ಪಂಪ, ಬಸವಣ್ಣನವರ ಕಾಲದಿಂದಲೂ ಬಂಡಾಯದ ಬಹುದೊಡ್ಡ ಚಹರೆಗಳು ಇದ್ದು, ಅಂತಹ ಪರಂಪರೆ ಕನ್ನಡದ್ದಾಗಿದೆ. ವಚನ ಸಾಹಿತ್ಯದಲ್ಲಿ ದಲಿತರೂ ಸೇರಿದಂತೆ ತಳಸಮುದಾಯದ ವಚನಕಾರರು, ಮಹಿಳಾ ವಚನಕಾರರು ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ. ಕುವೆಂಪು ಅವರು ಬಹುದೊಡ್ಡ ಬಂಡಾಯಕವಿ ಎಂದೂ ಹನುಮಂತಯ್ಯ ಹೇಳಿದರು.