‘ರಾಜ್ಯದಲ್ಲಿ ನಾಮದೇವ ಸಿಂಪಿ ಹಾಗೂ ಇದಕ್ಕೆ ಸಂಬಂಧಿಸಿದ ಉಪ ಪಂಗಡಗಳ 8 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದೆ. ಬಟ್ಟೆ ಹೊಲಿಯುವುದು ಹಾಗೂ ಅದಕ್ಕೆ ಸಂಬಂಧಿಸಿದ ಇತರೆ ಉಪ ಕಸುಬುಗಳನ್ನು ಸಮುದಾಯದವರು ಕೈಗೊಂಡಿದ್ದು, ಯಾವುದೇ ಸಾಮಾಜಿಕ ಭದ್ರತೆ ಹೊಂದಿಲ್ಲ’ ಎಂದು ಸಮಾಜದ ಅಧ್ಯಕ್ಷ ಎನ್.ಎಂ. ಸುರೇಶ್ ಅವರ ನೇತೃತ್ವದ ನಿಯೋಗ ಮುಖ್ಯಮಂತ್ರಿಗೆ ಮನವರಿಕೆ ಮಾಡಿಕೊಟ್ಟಿದೆ.