ರಾಗಿಣಿಯಿಂದ ಒತ್ತಡ ಇದೆಯೇ ಎಂಬ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, ‘ತನಿಖೆ ಬಗ್ಗೆ ಒತ್ತಡ ಇದೆ ಎಂದು ಹೇಳಿಲ್ಲ. ನಮ್ಮ ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ. ಇದೇ ಮೊದಲ ಬಾರಿಗೆ, ಇಷ್ಟು ದೊಡ್ಡ ಮಟ್ಟದ ತನಿಖೆಯಾಗುತ್ತಿರುವುದು ಕೂಡ ಬಿಜೆಪಿ ಸರ್ಕಾರದಿಂದ’ ಎಂದು ಸಚಿವರು ಹೇಳಿದರು.