<p><strong>ಬೆಂಗಳೂರು:</strong> ‘ಮಾಸ್ತಿ ಟ್ರಸ್ಟ್’ ನೀಡುವ 2022ನೇ ಸಾಲಿನ ಮಾಸ್ತಿ ಕಾದಂಬರಿ ಪುರಸ್ಕಾರಕ್ಕೆ ಬೆಂಗಳೂರಿನ ಡಾ. ಗಜಾ ನನ ಶರ್ಮ ಮತ್ತು ಧಾರವಾಡದ ಮಲ್ಲಿ ಕಾರ್ಜುನ ಹಿರೇಮಠ ಹಾಗೂಮಾಸ್ತಿ ಕಥಾ ಪುರಸ್ಕಾರಕ್ಕೆ ದಾದಾಪೀರ್ ಜೈಮನ್ ಆಯ್ಕೆಯಾಗಿದ್ದಾರೆ.</p>.<p>ಕನ್ನಡದ ಕತೆಗಾರ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ 131ನೇ ವರ್ಷದ ಸಂಸ್ಮರಣೆ ಪ್ರಯುಕ್ತ ಟ್ರಸ್ಟ್, ಸ್ಪರ್ಧೆ ಆಯೋಜಿಸಿತ್ತು.</p>.<p>ಮಾಸ್ತಿ ಕಾದಂಬರಿ ಪುರಸ್ಕಾರಕ್ಕೆ ಆಯ್ಕೆಯಾದ ಡಾ. ಗಜಾನನ ಶರ್ಮ ಅವರ ‘ಚೆನ್ನ ಭೈರಾದೇವಿ’ ಕೃತಿಯನ್ನು ಅಂಕಿತ ಪುಸ್ತಕ ಪ್ರಕಾಶನವು ಪ್ರಕಟಿಸಿದೆ. ಮಲ್ಲಿಕಾರ್ಜುನ ಹಿರೇಮಠ ಅವರ ‘ಹಾವಳಿ’ ಕಾದಂಬರಿಯನ್ನು ಧಾರವಾಡದ ಮನೋಹರ ಗ್ರಂಥಮಾಲಾ ಪ್ರಕಟಿಸಿದೆ.ಆಯ್ಕೆ ಸಮಿತಿ ಮುಂದೆ ಒಟ್ಟು 25 ಕೃತಿಗಳು ಬಂದಿದ್ದವು.</p>.<p>ದಾದಾಪೀರ್ ಜೈಮನ್ ಅವರ ‘ನೀಲ ಕುರಿಂಜಿ’ ಕೃತಿಯನ್ನು ರಾಯಚೂರು ಜಿಲ್ಲೆಯ ಮಾನ್ವಿಯ ವೈಷ್ಣವಿ ಪ್ರಕಾಶನ ಪ್ರಕಟಿಸಿದೆ. ಕಥಾ ಪುರಸ್ಕಾರಕ್ಕೆ 40 ಕೃತಿಗಳು ಬಂದಿದ್ದವು.</p>.<p>ಲೇಖಕರಿಗೆ ತಲಾ ₹ 25 ಸಾವಿರ ಹಾಗೂ ಪ್ರಕಾಶಕರಿಗೆ ತಲಾ ₹ 10 ಸಾವಿರ ನಗದು ಬಹುಮಾನವನ್ನು ಪುರಸ್ಕಾರ ಒಳಗೊಂಡಿದೆ.</p>.<p>ಈಶ್ವರ ಚಂದ್ರ, ಡಾ.ಎಂ.ಎಸ್. ಆಶಾದೇವಿ, ವಿಜಯಶಂಕರ, ಎಚ್. ದಂಡಪ್ಪ, ಚ.ಹ. ರಘುನಾಥ, ಡಾ. ಚಿಂತಾಮಣಿ ಕೊಡ್ಲೆಕೆರೆ, ಮಾವಿನಕೆರೆ ರಂಗನಾಥನ್ ಅವರು ಸ್ಪರ್ಧೆಯ ತೀರ್ಪುಗಾರರಾಗಿದ್ದರು.</p>.<p>ಮಾಸ್ತಿ ಪುರಸ್ಕಾರ ಸಮಾರಂಭವನ್ನು ಅಕ್ಟೋಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ಮಾವಿನಕೆರೆ ರಂಗನಾಥನ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಮಾಸ್ತಿ ಟ್ರಸ್ಟ್’ ನೀಡುವ 2022ನೇ ಸಾಲಿನ ಮಾಸ್ತಿ ಕಾದಂಬರಿ ಪುರಸ್ಕಾರಕ್ಕೆ ಬೆಂಗಳೂರಿನ ಡಾ. ಗಜಾ ನನ ಶರ್ಮ ಮತ್ತು ಧಾರವಾಡದ ಮಲ್ಲಿ ಕಾರ್ಜುನ ಹಿರೇಮಠ ಹಾಗೂಮಾಸ್ತಿ ಕಥಾ ಪುರಸ್ಕಾರಕ್ಕೆ ದಾದಾಪೀರ್ ಜೈಮನ್ ಆಯ್ಕೆಯಾಗಿದ್ದಾರೆ.</p>.<p>ಕನ್ನಡದ ಕತೆಗಾರ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ 131ನೇ ವರ್ಷದ ಸಂಸ್ಮರಣೆ ಪ್ರಯುಕ್ತ ಟ್ರಸ್ಟ್, ಸ್ಪರ್ಧೆ ಆಯೋಜಿಸಿತ್ತು.</p>.<p>ಮಾಸ್ತಿ ಕಾದಂಬರಿ ಪುರಸ್ಕಾರಕ್ಕೆ ಆಯ್ಕೆಯಾದ ಡಾ. ಗಜಾನನ ಶರ್ಮ ಅವರ ‘ಚೆನ್ನ ಭೈರಾದೇವಿ’ ಕೃತಿಯನ್ನು ಅಂಕಿತ ಪುಸ್ತಕ ಪ್ರಕಾಶನವು ಪ್ರಕಟಿಸಿದೆ. ಮಲ್ಲಿಕಾರ್ಜುನ ಹಿರೇಮಠ ಅವರ ‘ಹಾವಳಿ’ ಕಾದಂಬರಿಯನ್ನು ಧಾರವಾಡದ ಮನೋಹರ ಗ್ರಂಥಮಾಲಾ ಪ್ರಕಟಿಸಿದೆ.ಆಯ್ಕೆ ಸಮಿತಿ ಮುಂದೆ ಒಟ್ಟು 25 ಕೃತಿಗಳು ಬಂದಿದ್ದವು.</p>.<p>ದಾದಾಪೀರ್ ಜೈಮನ್ ಅವರ ‘ನೀಲ ಕುರಿಂಜಿ’ ಕೃತಿಯನ್ನು ರಾಯಚೂರು ಜಿಲ್ಲೆಯ ಮಾನ್ವಿಯ ವೈಷ್ಣವಿ ಪ್ರಕಾಶನ ಪ್ರಕಟಿಸಿದೆ. ಕಥಾ ಪುರಸ್ಕಾರಕ್ಕೆ 40 ಕೃತಿಗಳು ಬಂದಿದ್ದವು.</p>.<p>ಲೇಖಕರಿಗೆ ತಲಾ ₹ 25 ಸಾವಿರ ಹಾಗೂ ಪ್ರಕಾಶಕರಿಗೆ ತಲಾ ₹ 10 ಸಾವಿರ ನಗದು ಬಹುಮಾನವನ್ನು ಪುರಸ್ಕಾರ ಒಳಗೊಂಡಿದೆ.</p>.<p>ಈಶ್ವರ ಚಂದ್ರ, ಡಾ.ಎಂ.ಎಸ್. ಆಶಾದೇವಿ, ವಿಜಯಶಂಕರ, ಎಚ್. ದಂಡಪ್ಪ, ಚ.ಹ. ರಘುನಾಥ, ಡಾ. ಚಿಂತಾಮಣಿ ಕೊಡ್ಲೆಕೆರೆ, ಮಾವಿನಕೆರೆ ರಂಗನಾಥನ್ ಅವರು ಸ್ಪರ್ಧೆಯ ತೀರ್ಪುಗಾರರಾಗಿದ್ದರು.</p>.<p>ಮಾಸ್ತಿ ಪುರಸ್ಕಾರ ಸಮಾರಂಭವನ್ನು ಅಕ್ಟೋಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ಮಾವಿನಕೆರೆ ರಂಗನಾಥನ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>