‘ನಿಖರ ಕಾರಣ ನೀಡದೆ 80 ಕಾರ್ಮಿಕರನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಲಾಗಿದೆ. ಈ ಪೈಕಿ ಕೆಲವರು 30 ವರ್ಷಕ್ಕೂ ಅಧಿಕ ಕಾಲ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರತಿಷ್ಠಿತ ಸಾರ್ವಜನಿಕ ಉದ್ದಿಮೆಯೊಂದರಿಂದ ಇಷ್ಟೊಂದು ಮಂದಿಯನ್ನು ವಜಾಗೊಳಿಸಿರುವುದು ಅಲ್ಲಿ ಹೂಡಿಕೆಯ ಕೊರತೆಯಾಗಿರುವುದಕ್ಕೆ ನಿದರ್ಶನ. ಸಾರ್ವಜನಿಕ ಉದ್ದಿಮೆಗಳಲ್ಲಿನ ವೆಚ್ಚ ಕಡಿತಕ್ಕೆ ಮುಂದಾಗಿರುವ ನರೇಂದ್ರ ಮೋದಿ ಸರ್ಕಾರವು ಅದಕ್ಕಾಗಿ ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡುವ ತಂತ್ರ ಅನುಸರಿಸುತ್ತಿದೆ’ ಎಂದು ಆರೋಪಿಸಿದ್ದಾರೆ.