ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘₹ 431 ಕೋಟಿ ಮೊತ್ತದಲ್ಲಿ ಕೊಳವೆಬಾವಿಗಳನ್ನು ಕೊರೆಯುವ ಕಾಮಗಾರಿಗಳ ಟೆಂಡರ್ನಲ್ಲಿ ಅವ್ಯವಹಾರ ನಡೆದಿರುವುದನ್ನು ದಾಖಲೆಸಮೇತ ಬಹಿರಂಗಪಡಿಸಿದ್ದೆ. ₹ 173 ಕೋಟಿಯಷ್ಟು ಅವ್ಯವಹಾರ ನಡೆದಿರುವುದನ್ನೂ ತಿಳಿಸಿದ್ದೆ. ತನಿಖೆಗೆ ಆದೇಶಿಸಿದ್ದ ಸಮಾಜ ಕಲ್ಯಾಣ ಇಲಾಖೆ, ಈಗ ಷರತ್ತುಬದ್ಧವಾಗಿ ಕಾಮಗಾರಿ ಪೂರ್ಣಗೊಳಿಸಲು ಅನುಮತಿ ನೀಡಿದೆ’ ಎಂದು ದೂರಿದರು.