‘ಪರಿಹಾರ ಪಾವತಿಸಲು ಹಣ ಇಲ್ಲ ಎಂದು ಪಾಲಿಕೆ ಹೇಳುತ್ತಿದ್ದರೆ, ತನ್ನ ಸ್ವಂತ ಆದಾಯದಲ್ಲಿ ಭರಿಸಿಕೊಳ್ಳಲಿ ಎಂದು ಸರ್ಕಾರ ಹೇಳುತ್ತಿದೆ. ಹೀಗಾಗಿ, ತನ್ನ ಆಸ್ತಿ ಅಡಮಾನ ಇಡಲು ಪಾಲಿಕೆಗೆ ಸರ್ಕಾರ ಅನುಮತಿ ನೀಡಬೇಕು. ಇಲ್ಲವೇ ಹಣ ಬಿಡುಗಡೆ ಮಾಡಬೇಕು. ಈ ಸಂಬಂಧ ತನ್ನ ನಿಲುವು ಸ್ಪಷ್ಟಪಡಿಸಬೇಕು’ ಎಂದು ಹೇಳಿತು.