‘ಒಬ್ಬ ವ್ಯಕ್ತಿ ಇನ್ನು ಮುಂದೆ 108 ಎಕರೆ, ಒಂದು ಕುಟುಂಬ 432 ಎಕರೆ ಜಮೀನು ಹೊಂದಬಹುದಾಗಿದೆ.ಇದು ಬಂಡವಾಳಶಾಹಿ ವ್ಯವಸ್ಥೆಯನ್ನು ಮತ್ತಷ್ಟು ಬಲಗೊಳಿಸಲಿದೆ. ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ರೈತ ವರ್ಗವನ್ನು ನಾಶ ಮಾಡಲಿದೆ. ದೇಶದ ಕೃಷಿ ಉತ್ಪನ್ನದ ಮೇಲೆ ದುಷ್ಪರಿಣಾಮ ಬೀರಲಿದೆ. ಸಂವಿಧಾನದಲ್ಲಿ ಉಲ್ಲೇಖಿತವಾದ ಸಮಾಜವಾದದ ಮೂಲ ಪರಿಕಲ್ಪನೆಗೆ ಕೊಡಲಿ ಪೆಟ್ಟು ಬಿದ್ದಿದೆ’ ಎಂದು ಅರ್ಜಿಯಲ್ಲಿ ವಿವರಿಸಿದ್ದಾರೆ.