ಬೆಂಗಳೂರು: ಸಚಿವರ ಖಾತೆ ಗಳ ಹಂಚಿಕೆಯಲ್ಲಿ ಆದ ಗೊಂದಲದಿಂದ ಮುಖ್ಯಮಂತ್ರಿ ಮತ್ತು ಸರ್ಕಾರದ ವರ್ಚಸ್ಸಿಗೆ ಧಕ್ಕೆ ಆಗಿದೆ ಎಂದು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ‘ಯಾವುದೇ ಕಾರಣಕ್ಕೂ ಸರ್ಕಾ ರಕ್ಕೆ ಮುಜುಗರ ಆಗಬಾರದು. ಮುಂದಿನ ಎರಡು ವರ್ಷ ಸ್ಥಿರ ಆಡಳಿತ ಇರಬೇಕು ಎಂಬುದು ನಮ್ಮ ಅಪೇಕ್ಷೆ’ ಎಂದರು.
‘ವಲಸೆ ಬಂದವರು ಇಂಥದ್ದೇ ಖಾತೆಗಳನ್ನು ನೀಡ ಬೇಕು ಎಂದು ಪಟ್ಟು ಹಿಡಿದರು. ಕೆಲವರಿಗೆ 2–3 ಖಾತೆಗಳನ್ನು ನೀಡಲಾಯಿತು. ಪಕ್ಷಕ್ಕೆ ಕೆಲಸ ಮಾಡಿದವರು ನಾವು, ಅಧಿಕಾರ ಅನುಭವಿಸುವವರು ಅವರು’ ಎಂದು ರೇಣುಕಾಚಾರ್ಯ ಅಸಮಾಧಾನ ವ್ಯಕ್ತಪಡಿಸಿದರು.
‘ಇನ್ನು ಮುಂದೆ ನಾನು ಬಹಿರಂಗವಾಗಿ ಹೆಚ್ಚು ಮಾತನಾಡುವುದಿಲ್ಲ. ಏನು ಹೇಳ ಬೇಕಿದ್ದರೂ ಅದನ್ನು ಶಾಸಕಾಂಗ ಪಕ್ಷದ ಸಭೆಯಲ್ಲೇ ಹೇಳುತ್ತೇನೆ’ ಎಂದು ತಿಳಿಸಿದರು.